‘ಒಮ್ಮೆ ನಾಮಪತ್ರ ಅಂಗೀಕಾರವಾದ ನಂತರ ಅದನ್ನು ಪ್ರಶ್ನೆ ಮಾಡಲು ಆಗುವುದಿಲ್ಲ. ಏನಿದ್ದರೂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಬಹುದು. ನನ್ನ ಮಗ ದೇವೇಗೌಡ ಎಂಬುವರ ಬಳಿ ₹ 10 ಲಕ್ಷ ಸಾಲ ಪಡೆದಿದ್ದಾನೆ. ಅದರಲ್ಲಿ ಎಚ್.ಡಿ.ದೇವೇಗೌಡ ಅಂತ ಇದಿಯಾ. ಆದರೂ ಜಿಲ್ಲಾಧಿಕಾರಿ ಸ್ಪಷ್ಟನೆ ಕೇಳಿ ಮಗನಿಗೆ ನೋಟಿಸ್ ನೀಡಿದ್ದಾರೆ. ಬಿಜೆಪಿ ಪಕ್ಷದ ಪರವಾಗಿ ಜಿಲ್ಲಾಧಿಕಾರಿ ಕೆಲಸ ಮಾಡಬಾರದು. ನಾವು ಚುನಾವಣೆ ಮಾಡಬೇಕೋ, ಬೆಳಿಗ್ಗೆಯಾದರೆ ನೋಟಿಸ್ಗೆ ಉತ್ತರ ಕೊಡಲು ಓಡಾಡಬೇಕೋ’ ಎಂದು ಪ್ರಶ್ನಿಸಿದರು.