<p><strong>ಹುಬ್ಬಳ್ಳಿ:</strong> ಫೇಸ್ಬುಕ್ ಪ್ರೊಫೈಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ‘ಮೈ ಭಿ ಚೌಕಿದಾರ್’ ಎಂದು ಬರೆದುಕೊಂಡಿದ್ದ ಇಲ್ಲಿಯ ರೈಲ್ವೆ ಸುರಕ್ಷಾ ಬಲದ (ಆರ್ಪಿಎಫ್) ಶಸ್ತ್ರಾಗಾರದ ಎಎಸ್ಐ ಲಕ್ಷ್ಮಣ ಪಾಟೀಲ ಅವರಿಗೆ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ನೋಟಿಸ್ ಜಾರಿಗೊಳಿಸಿದ್ದಾರೆ.</p>.<p>ಮೂಲತಃ ಬೆಳಗಾವಿಯವರಾದ ಲಕ್ಷ್ಮಣ ಅವರು ನಗರದ ಆರ್ಪಿಎಫ್ ಘಟಕದಲ್ಲಿ ಎಎಸ್ಐ ಆಗಿದ್ದಾರೆ. ತಮ್ಮ ಫೇಸ್ಬುಕ್ ಖಾತೆಗೆ ಬಳಸಿದ ಪ್ರೊಫೈಲ್ ಫೋಟೊ ಮೇಲೆ ಇಂಗ್ಲಿಷ್ನಲ್ಲಿ ಮೈ ಭಿ ಚೌಕಿದಾರ್ ಎಂದು ಬರೆದಿದ್ದರು. ಹೆಸರಿನ ಮುಂದೆಯೂ ಚೌಕಿದಾರ್ ಬರೆದಿದ್ದರು.</p>.<p>ಈ ವಿಚಾರ ಚುನಾವಣಾಧಿಕಾರಿಗಳ ಗಮನಕ್ಕೆ ಬಂದಿದೆ ಎಂಬುದನ್ನು ಅರಿತ ಲಕ್ಷ್ಮಣ ಪಾಟೀಲ ತಕ್ಷಣ ಪ್ರೊಫೈಲ್ ಚಿತ್ರವನ್ನು ಅಳಿಸಿದರು. ಆದರೆ, ಹೆಸರಿನ ಮುಂದೆ ಚೌಕಿದಾರ ಹಾಗೆಯೇ ಉಳಿದಿತ್ತು.</p>.<p>ಇತ್ತೀಚೆಗೆ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳು ಹಾಗೂ ಸಂಸದರು, ಶಾಸಕರ ಟ್ವಿಟ್ಟರ್, ಫೇಸ್ಬುಕ್ ಖಾತೆಗಳಲ್ಲಿ ‘ಚೌಕಿದಾರ್’ ಎಂದು ಸೇರಿಸಿಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಬಹುತೇಕ ಸಚಿವರು ಚೌಕಿದಾರ್ ಎಂದು ಸೇರಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಫೇಸ್ಬುಕ್ ಪ್ರೊಫೈಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ‘ಮೈ ಭಿ ಚೌಕಿದಾರ್’ ಎಂದು ಬರೆದುಕೊಂಡಿದ್ದ ಇಲ್ಲಿಯ ರೈಲ್ವೆ ಸುರಕ್ಷಾ ಬಲದ (ಆರ್ಪಿಎಫ್) ಶಸ್ತ್ರಾಗಾರದ ಎಎಸ್ಐ ಲಕ್ಷ್ಮಣ ಪಾಟೀಲ ಅವರಿಗೆ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ನೋಟಿಸ್ ಜಾರಿಗೊಳಿಸಿದ್ದಾರೆ.</p>.<p>ಮೂಲತಃ ಬೆಳಗಾವಿಯವರಾದ ಲಕ್ಷ್ಮಣ ಅವರು ನಗರದ ಆರ್ಪಿಎಫ್ ಘಟಕದಲ್ಲಿ ಎಎಸ್ಐ ಆಗಿದ್ದಾರೆ. ತಮ್ಮ ಫೇಸ್ಬುಕ್ ಖಾತೆಗೆ ಬಳಸಿದ ಪ್ರೊಫೈಲ್ ಫೋಟೊ ಮೇಲೆ ಇಂಗ್ಲಿಷ್ನಲ್ಲಿ ಮೈ ಭಿ ಚೌಕಿದಾರ್ ಎಂದು ಬರೆದಿದ್ದರು. ಹೆಸರಿನ ಮುಂದೆಯೂ ಚೌಕಿದಾರ್ ಬರೆದಿದ್ದರು.</p>.<p>ಈ ವಿಚಾರ ಚುನಾವಣಾಧಿಕಾರಿಗಳ ಗಮನಕ್ಕೆ ಬಂದಿದೆ ಎಂಬುದನ್ನು ಅರಿತ ಲಕ್ಷ್ಮಣ ಪಾಟೀಲ ತಕ್ಷಣ ಪ್ರೊಫೈಲ್ ಚಿತ್ರವನ್ನು ಅಳಿಸಿದರು. ಆದರೆ, ಹೆಸರಿನ ಮುಂದೆ ಚೌಕಿದಾರ ಹಾಗೆಯೇ ಉಳಿದಿತ್ತು.</p>.<p>ಇತ್ತೀಚೆಗೆ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳು ಹಾಗೂ ಸಂಸದರು, ಶಾಸಕರ ಟ್ವಿಟ್ಟರ್, ಫೇಸ್ಬುಕ್ ಖಾತೆಗಳಲ್ಲಿ ‘ಚೌಕಿದಾರ್’ ಎಂದು ಸೇರಿಸಿಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಬಹುತೇಕ ಸಚಿವರು ಚೌಕಿದಾರ್ ಎಂದು ಸೇರಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>