ತುಮಕೂರು: ನಾವು ಮತ್ತು ಉಪಮುಖ್ಯಮಂತ್ರಿ ಇತರರು ಇಲ್ಲಿ ಸಭೆ ನಡೆಸಿದ್ದು, ಚುನಾವಣೆ ಸಿದ್ಧತೆ ಬಗ್ಗೆ ಹೊರೆತು,ಮುದ್ದಹನುಮೇಗೌಡ, ರಾಜಣ್ಣ ಅವರ ವಿಚಾರದ ಬಗ್ಗೆ ಅಲ್ಲ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಮುದ್ದಹನುಮೇಗೌಡ, ರಾಜಣ್ಣ ಅವರು ನಾಮಪತ್ರ ಹಿಂದಕ್ಕೆ ಪಡೆಯುವ ವಿಶ್ವಾಸವಿದೆ. ಅವರ ಮನವೊಲಿಕೆ ಕಾಂಗ್ರೆಸ್ಗೆ ಬಿಟ್ಟ ವಿಚಾರ ನಮ್ಮದಲ್ಲ’ ಎಂದರು.
ದೇವೇಗೌಡರು ಈ ಕ್ಷೇತ್ರದಲ್ಲಿ ಗೆಲ್ಲುವ ಭರವಸೆ ಇದೆ. ಅವರೂ ಈಗಾಗಲೇ ಸ್ಪಷ್ಟಪಡಿಸಿದ್ದು, ಪ್ರಧಾನಿ ಆಗಲ್ಲ. ರಾಹುಲ್ ಗಾಂಧಿ ಅವರ ಕೈ ಬಲಪಡಿಸುತ್ತೇನೆ ಎಂದಿದ್ದಾರೆ ಎಂದರು.