ಸವ್ಯಸಾಚಿ ಪಾಂಡಾ ಯಾರು?
2012ರಲ್ಲಿ ಇಟಲಿಯ ಇಬ್ಬರು ನಾಗರಿಕರ ಅಪಹರಣ ಸೇರಿದಂತೆ ಒಡಿಶಾದಲ್ಲಿ ಹಲವು ಹಿಂಸಾಚಾರಗಳನ್ನು ನಡೆಸಿದ್ದ ಆರೋಪದ ಮೇಲೆ ಸವ್ಯಸಾಚಿ ತಲೆಗೆ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು. 2008ರಲ್ಲಿ ಹಿಂದೂ ಧಾರ್ಮಿಕ ಮುಖಂಡ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರ ಹತ್ಯೆಯಲ್ಲೂ ಈತನ ಕೈವಾಡವಿದೆ ಎಂಬ ಆರೋಪಗಳಿದ್ದವು. ಈ ಘಟನೆ ಬಳಿಕ ಹಿಂದೂ–ಕ್ರಿಶ್ಚಿಯನ್ ಗಲಭೆಯೂ ನಡೆದಿತ್ತು.