ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡ ಕುಟುಂಬಕ್ಕೆ 9ರ ಕಂಟಕ: ಸೋಲು ಖಚಿತ ಎಂದ ಎ.ಮಂಜು

Last Updated 23 ಮಾರ್ಚ್ 2019, 19:58 IST
ಅಕ್ಷರ ಗಾತ್ರ

ಹಾಸನ: ‘9 ಅನ್ನೋದು ಎಚ್.ಡಿ.ದೇವೇಗೌಡರಿಗೆ ಕಂಟಕವಾಗಿದ್ದು, 1989, 1999ರಲ್ಲಿ ಸೋಲು ಉಂಟಾಗಿದೆ. ಅದರಂತೆ 2019 ಹಾಗೂ ಚುನಾವಣೆ ನಡೆಯುವ ಏಪ್ರಿಲ್‌ 18, ಅಂದರೆ 1+8=9. ಹಾಗಾಗಿ ಅವರಿಗೆ ಸೋಲು ಖಚಿತ’ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಹೇಳಿದರು.

ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದರು. ‘ನಾಯಕರು ಒಂದಾಗಬಹುದು. ಆದರೆ, ಹಳ್ಳಿಯ ನೊಂದ ಮತದಾರರು ಒಂದಾಗಲ್ಲ. ಸಂತ್ರಸ್ತರಿಗೆ ಬಿಸ್ಕತ್‌, ಹೂಗಳನ್ನು ಎಸೆಯುತ್ತಿದ್ದ ರೇವಣ್ಣ, ನಾನು ಬಿಜೆಪಿ ಅಭ್ಯರ್ಥಿಯಾಗುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ನಾಯಕರ ಮನೆಗೆ ಹೋಗಿ ಬೆಂಬಲ ಕೋರುತ್ತಿದ್ದಾರೆ. ಕಾಂಗ್ರೆಸ್ 20, ಜೆಡಿಎಸ್ 8 ಸೀಟು ಹಂಚಿಕೆ ಮಾಡಿಕೊಂಡಿವೆ. ಆದರೆ, ಜೆಡಿಎಸ್‌ಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಅನ್ಯ ಪಕ್ಷದವರನ್ನು ಕರೆ ತಂದು ನಿಲ್ಲಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ನಮಗೆ ಕಾಂಗ್ರೆಸ್ ಮತವೇ ಬೇಡ ಎಂದಿದ್ದ ಜೆಡಿಎಸ್ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಮತದಾರರು
ಕಾದಿದ್ದಾರೆ. ರೈತರ ಮಕ್ಕಳಾದ ಇವರಿಗೆ ಕೃಷಿ, ತೋಟಗಾರಿಕೆ ಖಾತೆ ಬೇಡ. ಹಣವಿರುವ ಲೋಕೋಪಯೋಗಿ, ಇಂಧನ ಖಾತೆಯೇ ಬೇಕು’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT