ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದರು. ‘ನಾಯಕರು ಒಂದಾಗಬಹುದು. ಆದರೆ, ಹಳ್ಳಿಯ ನೊಂದ ಮತದಾರರು ಒಂದಾಗಲ್ಲ. ಸಂತ್ರಸ್ತರಿಗೆ ಬಿಸ್ಕತ್, ಹೂಗಳನ್ನು ಎಸೆಯುತ್ತಿದ್ದ ರೇವಣ್ಣ, ನಾನು ಬಿಜೆಪಿ ಅಭ್ಯರ್ಥಿಯಾಗುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ನಾಯಕರ ಮನೆಗೆ ಹೋಗಿ ಬೆಂಬಲ ಕೋರುತ್ತಿದ್ದಾರೆ. ಕಾಂಗ್ರೆಸ್ 20, ಜೆಡಿಎಸ್ 8 ಸೀಟು ಹಂಚಿಕೆ ಮಾಡಿಕೊಂಡಿವೆ. ಆದರೆ, ಜೆಡಿಎಸ್ಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಅನ್ಯ ಪಕ್ಷದವರನ್ನು ಕರೆ ತಂದು ನಿಲ್ಲಿಸುತ್ತಿದ್ದಾರೆ’ ಎಂದು ಟೀಕಿಸಿದರು.