ನಗರದಲ್ಲಿ ಗುರುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ ದುರ್ಬಲ ಸರ್ಕಾರ (ರಾಜ್ಯ) ಹಾಗೂ ಪ್ರಬಲ ಸರ್ಕಾರ (ಕೇಂದ್ರ) ಹೋಲಿಕೆಯ ಭಾಷಣಕ್ಕೆ ಶುಕ್ರವಾರ ಇಲ್ಲಿ ತಿರುಗೇಟು ನೀಡಿದ ಅವರು, ‘ತಮ್ಮದು ಮಜಬೂತ್ ಸರ್ಕಾರ ಎನ್ನುವ ಪ್ರಧಾನಿ ನರೇಂದ್ರ ಮೋದಿ, ಐದು ವರ್ಷಗಳ ಆಡಳಿತದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿ ಅವರ ಸಂಕಷ್ಟಕ್ಕೆ ಮಿಡಿಯಲಿಲ್ಲವೇಕೆ’ ಎಂದು ಕೇಳಿದರು.