ಯೋಗಿ ಅವರಿಗೆ ‘ಆಯುಷ್ಮಾನ್ಭವ’ ಚಿತ್ರ ನಿರ್ಮಾಣದ ವೇಳೆ ಹಣಕಾಸಿನ ಸಮಸ್ಯೆ ಎದುರಾಯಿತು. ನನ್ನ ಸ್ನೇಹಿತರಿಂದ ಅವರಿಗೆ ₹ 2 ಕೋಟಿ ಸಾಲ ಕೊಡಿಸಿದ್ದೇನೆ. ಚಿತ್ರದ ಗ್ರಾಫಿಕ್ಸ್ ವೇಳೆಯೂ ಹಣದ ಸಮಸ್ಯೆಯಾಯಿತು. ಆಗಲೂ ಹಣಕಾಸಿನ ನೆರವು ನೀಡಿದ್ದೇನೆ. ₹ 9 ಕೋಟಿಗೆ ಈ ಚಿತ್ರದ ವಿತರಣೆಯ ಹಕ್ಕನ್ನು ಕೇಳಿದ್ದು ನಿಜ. ಕೊನೆಗೆ ಜಯಣ್ಣ ಅವರು ಈ ಚಿತ್ರ ವಿತರಿಸಿದರು. ದ್ವಾರಕೀಶ್, ಜಯಣ್ಣ ಮತ್ತು ಯೋಗಿ ನಡುವಿನ ವ್ಯವಹಾರದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಯೋಗಿ ಅವರು ನನ್ನ ಸ್ನೇಹಿತರಿಗೆ ಇಂದಿಗೂ ಅಸಲು ಮತ್ತು ಬಡ್ಡಿ ನೀಡಿಲ್ಲ ಎಂದು ವಿವರಿಸಿದರು.