<p><strong>ಬೆಂಗಳೂರು</strong>: ಅಪಘಾತದಲ್ಲಿ ಮೃತಪಟ್ಟ ನಟ ಸಂಚಾರಿ ವಿಜಯ್ ಇನ್ನು ನೆನಪು ಮಾತ್ರ. ಹುಟ್ಟೂರಿನ ಮಣ್ಣಲ್ಲಿ ಮಣ್ಣಾಗಿರುವ ಅವರ ಬಗ್ಗೆ ಅನೇಕ ಜನ ಕನಿಕರ ಪಡುತ್ತಿದ್ದಾರೆ. ಅವರ ಆಪ್ತರು ಅವರೊಂದಿಗೆ ಕಳೆದ ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ.</p>.<p>ನಟ ನೀನಾಸಂ ಸತೀಶ್ ಕೂಡ ಸಂಚಾರಿ ವಿಜಯ್ ಅವರ ಆಪ್ತ ಸ್ನೇಹಿತರು. ವಿಜಯ್ ಬಗ್ಗೆ ವಿಡಿಯೋ ಒಂದನ್ನು ಸತೀಶ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.</p>.<p>ಕೊರೊನಾ ಲಾಕ್ಡೌನ್ ಸಂತ್ರಸ್ತರಿಗೆ ಆಹಾರದ ಕಿಟ್ಗಳನ್ನು ಹಂಚುವುದು, ಸಹಾಯ ಮಾಡುವುದನ್ನು ಮಾಡುತ್ತಿದ್ದ ಸಂಚಾರಿ ಅವರ ಮಾನವೀಯ ಗುಣಗಳನ್ನು ಸತೀಶ್ ನೆನಪಿಸಿದ್ದಾರೆ.</p>.<p>ಚೀಲಕ್ಕೆ ಅಕ್ಕಿಯನ್ನು ತುಂಬುತ್ತಿದ್ದ ಸಂಚಾರಿ ಬಗ್ಗೆ ಸತೀಶ್ ತಮಾಷೆ ಮಾಡುತ್ತಾ, ‘ನೀವುರೇಷನ್ ತುಂಬುತ್ತಿರುವುದನ್ನು ನೋಡಿದರೆ, ನಿಮಗೆಇದರಲ್ಲೂ ರಾಷ್ಟ್ರ ಪ್ರಶಸ್ತಿ ಬಂದರೂ ಬರಬಹುದು‘ ಎಂದು ತಮಾಷೆ ಮಾಡುತ್ತಾರೆ.</p>.<p>ಆಗ, ವಿಜಯ್, ‘ಹೌದೌದು, ಅದು ನ್ಯಾಷನಲ್ ಅವಾರ್ಡ್ ಅಲ್ಲ, ರೇಷನಲ್ ಅವಾರ್ಡ್‘ ಎಂದು ತಮಾಷೆ ಮಾಡಿ ನಗುತ್ತಾರೆ. ಈ ಟ್ವೀಟ್ ಗೆ ಅನೇಕರು ವಿಜಯ್ ಬಗ್ಗೆ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.</p>.<p>ಕಳೆದ ಶನಿವಾರ ಸ್ನೇಹಿತನೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಜೆಪಿ ನಗರದ ಬಳಿ ಅಪಘಾತ ಸಂಭವಿಸಿ ವಿಜಯ್ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ ಅವರು ಮಂಗಳವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/entertainment/cinema/actor-rishi-remembers-to-sanchari-vijay-839076.html" target="_blank">ಡೈಲಾಗ್ ಮರೆತರೂ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಸಂಚಾರಿ ವಿಜಯ್</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಅಪಘಾತದಲ್ಲಿ ಮೃತಪಟ್ಟ ನಟ ಸಂಚಾರಿ ವಿಜಯ್ ಇನ್ನು ನೆನಪು ಮಾತ್ರ. ಹುಟ್ಟೂರಿನ ಮಣ್ಣಲ್ಲಿ ಮಣ್ಣಾಗಿರುವ ಅವರ ಬಗ್ಗೆ ಅನೇಕ ಜನ ಕನಿಕರ ಪಡುತ್ತಿದ್ದಾರೆ. ಅವರ ಆಪ್ತರು ಅವರೊಂದಿಗೆ ಕಳೆದ ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ.</p>.<p>ನಟ ನೀನಾಸಂ ಸತೀಶ್ ಕೂಡ ಸಂಚಾರಿ ವಿಜಯ್ ಅವರ ಆಪ್ತ ಸ್ನೇಹಿತರು. ವಿಜಯ್ ಬಗ್ಗೆ ವಿಡಿಯೋ ಒಂದನ್ನು ಸತೀಶ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.</p>.<p>ಕೊರೊನಾ ಲಾಕ್ಡೌನ್ ಸಂತ್ರಸ್ತರಿಗೆ ಆಹಾರದ ಕಿಟ್ಗಳನ್ನು ಹಂಚುವುದು, ಸಹಾಯ ಮಾಡುವುದನ್ನು ಮಾಡುತ್ತಿದ್ದ ಸಂಚಾರಿ ಅವರ ಮಾನವೀಯ ಗುಣಗಳನ್ನು ಸತೀಶ್ ನೆನಪಿಸಿದ್ದಾರೆ.</p>.<p>ಚೀಲಕ್ಕೆ ಅಕ್ಕಿಯನ್ನು ತುಂಬುತ್ತಿದ್ದ ಸಂಚಾರಿ ಬಗ್ಗೆ ಸತೀಶ್ ತಮಾಷೆ ಮಾಡುತ್ತಾ, ‘ನೀವುರೇಷನ್ ತುಂಬುತ್ತಿರುವುದನ್ನು ನೋಡಿದರೆ, ನಿಮಗೆಇದರಲ್ಲೂ ರಾಷ್ಟ್ರ ಪ್ರಶಸ್ತಿ ಬಂದರೂ ಬರಬಹುದು‘ ಎಂದು ತಮಾಷೆ ಮಾಡುತ್ತಾರೆ.</p>.<p>ಆಗ, ವಿಜಯ್, ‘ಹೌದೌದು, ಅದು ನ್ಯಾಷನಲ್ ಅವಾರ್ಡ್ ಅಲ್ಲ, ರೇಷನಲ್ ಅವಾರ್ಡ್‘ ಎಂದು ತಮಾಷೆ ಮಾಡಿ ನಗುತ್ತಾರೆ. ಈ ಟ್ವೀಟ್ ಗೆ ಅನೇಕರು ವಿಜಯ್ ಬಗ್ಗೆ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.</p>.<p>ಕಳೆದ ಶನಿವಾರ ಸ್ನೇಹಿತನೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಜೆಪಿ ನಗರದ ಬಳಿ ಅಪಘಾತ ಸಂಭವಿಸಿ ವಿಜಯ್ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ ಅವರು ಮಂಗಳವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/entertainment/cinema/actor-rishi-remembers-to-sanchari-vijay-839076.html" target="_blank">ಡೈಲಾಗ್ ಮರೆತರೂ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಸಂಚಾರಿ ವಿಜಯ್</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>