ಈ ಹಿಂದೆ ಹೊಸ ಪಕ್ಷ ಸ್ಥಾಪಿಸುವ ಮೂಲಕ ರಾಜಕೀಯಕ್ಕೆ ಬರುವುದಾಗಿ ಹೇಳಿದ್ದ ರಜನಿಕಾಂತ್, ಆ ಬಳಿಕ ಆರೋಗ್ಯ ಹದ್ದಗೆಟ್ಟಿದ್ದರಿಂದ ರಾಜಕೀಯಕ್ಕೆ ಬರುವ ನಿರ್ಧಾರದಿಂದ ಹಿಂದೆ ಸರಿದಿದ್ದರು. ರಜನಿಯವರ ಈ ನಿರ್ಧಾರ ಸಹಜವಾಗಿಯೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ರಜನಿಕಾಂತ್ ತಮ್ಮ ನಿರ್ಧಾರ ಹಿಂಪಡೆದು ರಾಜಕೀಯಕ್ಕೆ ಬರಬೇಕೆಂದು ಒತ್ತಾಯಿಸಿ ಅಭಿಮಾನಿ ಸಂಘ ನಿನ್ನೆ ಪ್ರತಿಭಟನೆ ನಡೆಸಿತ್ತು.