‘ವಿಜಯ್ ಎಂತಹ ಅದ್ಭುತ ಕಲಾವಿದ ಎನ್ನುವುದು ನಮಗೆಲ್ಲರಿಗೂ ತಿಳಿದೆದೆ. 13 ಮರ್ಗೋಸಾ ಮಹಲ್ ನಾಟಕದ ಸಂದರ್ಭದಲ್ಲಿ ನಾವಿಬ್ಬರೂ ವೇದಿಕೆಯಲ್ಲಿ ಜೊತೆಯಾಗಿದ್ದಾಗ ನಡೆದ ಘಟನೆಯೊಂದನ್ನು ನಾನು ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ. ವಿಜಯ್ ಒಮ್ಮೆ ವೇದಿಕೆಯಲ್ಲಿರುವಾಗ ನಾಟಕದ ಸಂಭಾಷಣೆ ಮರೆತಿದ್ದ. ಸಭಾಂಗಣದಲ್ಲಿ ತುಂಬಿದ್ದ ಪ್ರೇಕ್ಷಕರ ಎದುರು ಹೇಳುವ ಡೈಲಾಗ್ ಮರೆತ ಸಂದರ್ಭದಲ್ಲಿ ಆಗುವಂತಹ ಭಯ ಆ ನಟನಿಗೆ ಮಾತ್ರ ಗೊತ್ತು. ಆದರೆ ವಿಜಯ್ ಭಯಪಟ್ಟಿರಲಿಲ್ಲ. ಬದಲಾಗಿ, ತಕ್ಷಣದಲ್ಲೇ ಹಿಂದಿನ ದೃಶ್ಯದಲ್ಲಿ ತನ್ನದೇ ನಟನೆಯನ್ನು ಅಣಕು ಮಾಡಿ, ಹಾವಭಾವಗಳಿಂದಲೇ ನಟಿಸಿದ್ದರು. ಅವರ ನಟನೆ ಎಷ್ಟು ಅದ್ಭುತವಾಗಿತ್ತೆಂದರೆ, ಒಂದು ನಿಮಿಷ ಯಾವುದೇ ಮಾತುಗಳಿಲ್ಲದೆ ಪ್ರೇಕ್ಷಕರನ್ನೆಲ್ಲಾ ಹಿಡಿದಿಟ್ಟುಕೊಂಡಿದ್ದರು. ಒಂದು ಪದವನ್ನು ಹೇಳದೇ ಇದ್ದರೂ, ಅವರ ನಟನೆಗೆ ಇಡೀ ಪ್ರೇಕ್ಷಕ ವರ್ಗ ಚಪ್ಪಾಳೆಯ ಸುರಿಮಳೆಗೈದಿತ್ತು. ಈ ಸಂದರ್ಭವನ್ನೆ ಉಪಯೋಗಿಸಿಕೊಂಡು ನನಗೆ ಹಾಗೂ ನನ್ನ ಜೊತೆಗಿದ್ದ ಮತ್ತೋರ್ವ ಕಲಾವಿದರಿಗೆ ‘ನಾನು ಸಂಭಾಷಣೆ ಮರೆತಿದ್ದೇನೆ’ ಎನ್ನುವ ಸಂಕೇತ ನೀಡಿದ್ದರು. ದೃಶ್ಯದಲ್ಲಿ ಇಲ್ಲದ ಹಾವಭಾವ ಈಗೇಕೆ ಮಾಡಿದರು ಎನ್ನುವುದು ಆಗಷ್ಟೇ ನಮಗೆ ಅರಿವಾಯಿತು’