ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ಗುಣಮುಖರಾಗಿ: ಸಂಚಾರಿ ವಿಜಯ್‌ಗೆ ಶಿವರಾಜ್‌ಕುಮಾರ್‌ ಹಾರೈಕೆ

Last Updated 13 ಜೂನ್ 2021, 14:21 IST
ಅಕ್ಷರ ಗಾತ್ರ

ಬೆಂಗಳೂರು: ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಸಂಚಾರಿ ವಿಜಯ್‌ ಅವರು ಶೀಘ್ರ ಗುಣಮುಖರಾಗಲಿ ಎಂದು ನಟ ಶಿವರಾಜ್‌ಕುಮಾರ್‌ ಹಾರೈಸಿದ್ದಾರೆ.

‘ಶೀಘ್ರ ಗುಣಮುಖರಾಗಿ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ’ ಎಂದು ಇನ್‌ಸ್ಟಾಗ್ರಾಂನಲ್ಲಿ ಶಿವರಾಜ್‌ಕುಮಾರ್‌ ಬರೆದಿದ್ದಾರೆ. ಸಂಚಾರಿ ವಿಜಯ್‌ ಅವರ ಜೊತೆಗಿರುವ ಫೋಟೊವನ್ನೂ ಶಿವರಾಜ್‌ಕುಮಾರ್‌ ಅಪ್‌ಲೋಡ್‌ ಮಾಡಿದ್ದಾರೆ.

‘ಜೀವಕ್ಕೆ ಅಪಾಯವಿಲ್ಲ’: ‘ವಿಜಯ್‌ ಅವರ ಎದೆಬಡಿತ, ರಕ್ತದೊತ್ತಡ ಎಲ್ಲವೂ ಸಾಮಾನ್ಯವಾಗಿದೆ. ವೈದ್ಯರು ‘ವಿಜಯ್‌ ಅವರು ಅಪಾಯದಿಂದ ಹೊರಬಂದಿದ್ದಾರೆ’ ಎಂದು ತಿಳಿಸಿದ್ದಾರೆ. ಐಸಿಯು ಒಳಗೆ ನಾನು ಹೋಗಿದ್ದೆ, ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ಬೈಕ್‌ ಓಡಿಸುತ್ತಿದ್ದ ನವೀನ್‌ ಅವರಿಗೂ ಅಪಾಯವಿಲ್ಲ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದೊಂದು ವಾರದಿಂದ ನಾವಿಬ್ಬರೂ ಜೊತೆಗೇ ಇದ್ದೆವು, ಆಹಾರ ಕಿಟ್‌ಗಳನ್ನು ಹಂಚುತ್ತಿದ್ದೆವು. ‘ಉಸಿರು’ ತಂಡದೊಂದಿಗೆ ಕೋವಿಡ್‌ ಪರಿಹಾರ ಕಾರ್ಯದಲ್ಲಿ ವಿಜಯ್‌ ತೊಡಗಿದ್ದರು’ ಎಂದು ನಟ ನೀನಾಸಂ ಸತೀಶ್‌ ಹೇಳಿದರು.

ನಟ ಶರಣ್‌ ಅವರೂ ‘ವಿಜಯ್‌ ಸರ್‌ ಅವರು ಶೀಘ್ರವಾಗಿ, ಸಂಪೂರ್ಣವಾಗಿ ಗುಣಮುಖರಾಗಿ ಬರಲಿ. ಶೀಘ್ರವೇ ನೀವು ಮತ್ತಷ್ಟು ಚೇತರಿಸಿಕೊಳ್ಳಿ ಎಂದು ಆಶಿಸುತ್ತೇನೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT