‘ಜೀವಕ್ಕೆ ಅಪಾಯವಿಲ್ಲ’: ‘ವಿಜಯ್ ಅವರ ಎದೆಬಡಿತ, ರಕ್ತದೊತ್ತಡ ಎಲ್ಲವೂ ಸಾಮಾನ್ಯವಾಗಿದೆ. ವೈದ್ಯರು ‘ವಿಜಯ್ ಅವರು ಅಪಾಯದಿಂದ ಹೊರಬಂದಿದ್ದಾರೆ’ ಎಂದು ತಿಳಿಸಿದ್ದಾರೆ. ಐಸಿಯು ಒಳಗೆ ನಾನು ಹೋಗಿದ್ದೆ, ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ಬೈಕ್ ಓಡಿಸುತ್ತಿದ್ದ ನವೀನ್ ಅವರಿಗೂ ಅಪಾಯವಿಲ್ಲ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದೊಂದು ವಾರದಿಂದ ನಾವಿಬ್ಬರೂ ಜೊತೆಗೇ ಇದ್ದೆವು, ಆಹಾರ ಕಿಟ್ಗಳನ್ನು ಹಂಚುತ್ತಿದ್ದೆವು. ‘ಉಸಿರು’ ತಂಡದೊಂದಿಗೆ ಕೋವಿಡ್ ಪರಿಹಾರ ಕಾರ್ಯದಲ್ಲಿ ವಿಜಯ್ ತೊಡಗಿದ್ದರು’ ಎಂದು ನಟ ನೀನಾಸಂ ಸತೀಶ್ ಹೇಳಿದರು.