‘ಸಂಕಷ್ಟದಲ್ಲಿ ಸಿಲುಕಿರುವ ವಲಸಿಗರಿಗೆ ನೆರವಾಗಲು ನನ್ನನ್ನು ಮಾಧ್ಯಮವಾಗಿ ಬಳಸಿಕೊಂಡಿದ್ದಕ್ಕಾಗಿ ನಾನು ಭಗವಂತನಿಗೆ ಋಣಿಯಾಗಿದ್ದೇನೆ. ನನ್ನ ಹೃದಯಬಡಿತ ಇರುವುದು ಮುಂಬೈಯಲ್ಲಿ. ಆದರೆ ಈ ಘಟನೆಯ ನಂತರ ನನ್ನ ದೇಹದ ಭಾಗಗಳು ಬಿಹಾರ, ಜಾರ್ಖಂಡ್, ಅಸ್ಸಾಂ, ಉತ್ತರಾಖಂಡ ಹಾಗೂ ಇತರ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲೂ ಇವೆ ಎಂಬ ಭಾವನೆ ಮೂಡಿದೆ. ವಿವಿಧ ರಾಜ್ಯಗಳಲ್ಲಿ ನನಗೀಗ ಸ್ನೇಹಿತರಿದ್ದಾರೆ. ಅವರ ಜತೆಗೆ ಆಳವಾದ ಸಂಪರ್ಕಗಳನ್ನು ನಾನು ಹೊಂದಿದ್ದೇನೆ. ನನ್ನ ಆಂತರ್ಯದಲ್ಲಿ ಹುದುಗಿರುವ ಈ ಎಲ್ಲಾ ಕತೆಗಳನ್ನು ಪುಸ್ತಕದ ರೂಪದಲ್ಲಿ ಹೊರತರಲು ತೀರ್ಮಾನಿಸಿದ್ದೇನೆ. ನಿಮ್ಮೆಲ್ಲರ ಬೆಂಬಲ ಬೇಕಾಗಿದೆ’ ಎಂದು ಸೋನುಸೂದ್ ಹೇಳಿದ್ದಾರೆ.