<p>ಕನ್ನಡದ ನಟಿ ಸೋನು ಗೌಡ ಅವರು ಕುಟುಂಬಸ್ಥರ ಜೊತೆ ಪ್ರವಾಸ ಕೈಗೊಂಡಿದ್ದು, ಸಹೋದರಿ ನೇಹಾ ಅವರ ಪುತ್ರಿ ಜೊತೆ ಆನಂದಿಸಿರುವ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.</p><p>ನಟಿ ನೇಹಾ ಅವರು ಹಂಚಿಕೊಂಡ ವಿಡಿಯೊಗೆ ‘ಜಂಜಾಟದಿಂದ ದೂರಾಗಿ ಬೋಟ್ನಲ್ಲಿ ಕುಳಿತಿರುವಾಗ ತಲೆಯಲ್ಲಿ ಹತ್ತಾರು ಪ್ರಶ್ನೆಗಳು ಓಡುತ್ತಿದ್ದವು. ಈ ದಿನ ಪ್ರವಾಸ ಮಾತ್ರವಾಗಿರಲಿಲ್ಲ. ಬದಲಾಗಿ ನನ್ನ ಜೀವನದ ಕೆಲವು ಮಾತುಗಳು ಮುಖಾಮುಖಿಯಾಗುತ್ತಿದ್ದವು’ ಎಂದು ಬರೆದುಕೊಂಡಿದ್ದಾರೆ. </p>.<p>‘ಒಪ್ಪಿಕೊಳ್ಳುವಿಕೆ ಗುಣ ಸುಲಭವಲ್ಲ. ನಮ್ಮ ಓಡಾಟ ನಿಲ್ಲಿಸಿ, ಸ್ವಲ್ಪ ಹೊತ್ತು ಸಮಾಧಾನದಿಂದ ಕುಳಿತು ಆಲಿಸಿದಾಗ ಮಾತ್ರ ನಮ್ಮೊಳಗಿನ ಅಂತರಂಗದ ಮಾತು ಕೇಳಿಸುತ್ತದೆ‘ ಎಂದು ತಿಳಿಸಿದ್ದಾರೆ.</p><p>‘ಮಕ್ಕಳು ಸುಲಭವಾಗಿ ಪ್ರಕೃತಿಗೆ ಹೊಂದಿಕೊಳ್ಳುತ್ತಾರೆ. ಅವರಿಗೆ ನಿನ್ನೆಯ ಬಗ್ಗೆ ಕೊರಗಿರಲ್ಲ. ನಾಳೆಯ ಬಗ್ಗೆ ಚಿಂತೆ ಇರಲಿಲ್ಲ. ಆ ಕ್ಷಣವನ್ನು ಆನಂದಿಸುತ್ತಿದ್ದ ಮಕ್ಕಳಿಂದ ಮುಗ್ಧತೆಯನ್ನು ಕಲಿಯಬೇಕಿದೆ’ ಎಂದು ಹೇಳಿಕೊಂಡಿದ್ದಾರೆ.</p><p>ಈ ಪ್ರವಾಸದ ಪ್ರಯಾಣದಲ್ಲಿ ನನಗೆ ಅರ್ಥವಾಗಿದ್ದು ಇಷ್ಟು. ನಮ್ಮೊಳಗಿನ ಅಹಂಕಾರ, ಕೆಟ್ಟ ಆಲೋಚನೆಗಳನ್ನು ಮರೆತುಬಿಡಬೇಕು. ಮಕ್ಕಳ ನಿಷ್ಕಲ್ಮಶವಾದ ನಗುವನ್ನು ನಾವು ಕಲಿತು ಬದುಕು ಸಾಗಿಸಬೇಕು’ ಎಂದು ಬರೆದುಕೊಂಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡದ ನಟಿ ಸೋನು ಗೌಡ ಅವರು ಕುಟುಂಬಸ್ಥರ ಜೊತೆ ಪ್ರವಾಸ ಕೈಗೊಂಡಿದ್ದು, ಸಹೋದರಿ ನೇಹಾ ಅವರ ಪುತ್ರಿ ಜೊತೆ ಆನಂದಿಸಿರುವ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.</p><p>ನಟಿ ನೇಹಾ ಅವರು ಹಂಚಿಕೊಂಡ ವಿಡಿಯೊಗೆ ‘ಜಂಜಾಟದಿಂದ ದೂರಾಗಿ ಬೋಟ್ನಲ್ಲಿ ಕುಳಿತಿರುವಾಗ ತಲೆಯಲ್ಲಿ ಹತ್ತಾರು ಪ್ರಶ್ನೆಗಳು ಓಡುತ್ತಿದ್ದವು. ಈ ದಿನ ಪ್ರವಾಸ ಮಾತ್ರವಾಗಿರಲಿಲ್ಲ. ಬದಲಾಗಿ ನನ್ನ ಜೀವನದ ಕೆಲವು ಮಾತುಗಳು ಮುಖಾಮುಖಿಯಾಗುತ್ತಿದ್ದವು’ ಎಂದು ಬರೆದುಕೊಂಡಿದ್ದಾರೆ. </p>.<p>‘ಒಪ್ಪಿಕೊಳ್ಳುವಿಕೆ ಗುಣ ಸುಲಭವಲ್ಲ. ನಮ್ಮ ಓಡಾಟ ನಿಲ್ಲಿಸಿ, ಸ್ವಲ್ಪ ಹೊತ್ತು ಸಮಾಧಾನದಿಂದ ಕುಳಿತು ಆಲಿಸಿದಾಗ ಮಾತ್ರ ನಮ್ಮೊಳಗಿನ ಅಂತರಂಗದ ಮಾತು ಕೇಳಿಸುತ್ತದೆ‘ ಎಂದು ತಿಳಿಸಿದ್ದಾರೆ.</p><p>‘ಮಕ್ಕಳು ಸುಲಭವಾಗಿ ಪ್ರಕೃತಿಗೆ ಹೊಂದಿಕೊಳ್ಳುತ್ತಾರೆ. ಅವರಿಗೆ ನಿನ್ನೆಯ ಬಗ್ಗೆ ಕೊರಗಿರಲ್ಲ. ನಾಳೆಯ ಬಗ್ಗೆ ಚಿಂತೆ ಇರಲಿಲ್ಲ. ಆ ಕ್ಷಣವನ್ನು ಆನಂದಿಸುತ್ತಿದ್ದ ಮಕ್ಕಳಿಂದ ಮುಗ್ಧತೆಯನ್ನು ಕಲಿಯಬೇಕಿದೆ’ ಎಂದು ಹೇಳಿಕೊಂಡಿದ್ದಾರೆ.</p><p>ಈ ಪ್ರವಾಸದ ಪ್ರಯಾಣದಲ್ಲಿ ನನಗೆ ಅರ್ಥವಾಗಿದ್ದು ಇಷ್ಟು. ನಮ್ಮೊಳಗಿನ ಅಹಂಕಾರ, ಕೆಟ್ಟ ಆಲೋಚನೆಗಳನ್ನು ಮರೆತುಬಿಡಬೇಕು. ಮಕ್ಕಳ ನಿಷ್ಕಲ್ಮಶವಾದ ನಗುವನ್ನು ನಾವು ಕಲಿತು ಬದುಕು ಸಾಗಿಸಬೇಕು’ ಎಂದು ಬರೆದುಕೊಂಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>