<p><strong>ಮೈಸೂರು: </strong>‘ಕನ್ನಡ ಸಿನಿಮಾ ರಂಗದಲ್ಲಿ ಎಲ್ಲರೂ ಲೀಡರ್. ಈ ಕ್ಷೇತ್ರದಲ್ಲಿ ನನಗಿಂತ ಹಿರಿಯರಾದ ಅನಂತನಾಗ್, ರವಿಚಂದ್ರನ್ ಇದ್ದಾರೆ. ಸಿನಿಮಾ ನಗರಿ ನಿರ್ಮಾಣ ಸೇರಿದಂತೆ ಉತ್ತಮ ಕೆಲಸಕ್ಕೆ ನನ್ನ ಬೆಂಬಲವಿದೆ. ನಾನೂ ಕೈ ಜೋಡಿಸುತ್ತೇನೆ’ ಎಂದು ನಟ ಶಿವರಾಜ್ಕುಮಾರ್ ಮಂಗಳವಾರ ಇಲ್ಲಿಗೆ ಸಮೀಪದ ನಗುವನಹಳ್ಳಿಯಲ್ಲಿ ಹೇಳಿದರು.</p>.<p>‘ಸಿನಿಮಾ ನಗರಿ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ವಿಚಾರ. ಉತ್ತಮ ಸ್ಥಳದಲ್ಲಿ, ಸರಿಯಾದ ವಿಧಾನದಲ್ಲಿ ಆಗಬೇಕು. ಅವಸರಪಡಬಾರದು. ಇದು ವಿಶ್ವದಲ್ಲೇ ಅತ್ಯುತ್ತಮ ಸಿನಿಮಾ ನಗರಿ ಎನಿಸಿಕೊಳ್ಳಬೇಕು. ಅದಕ್ಕೆ ನಾವು ಕೂಡ ಸಲಹೆ ನೀಡುತ್ತೇವೆ. ಸಿನಿಮಾ ರಂಗಕ್ಕೆ ಹಾಗೂ ಜನರಿಗೆ ಉಪಯೋಗವಾಗುವಂತಿರಬೇಕು’ ಎಂದರು.</p>.<p><strong>ರಾಗಿ ತಿನ್ನುತ್ತೇವೆ:</strong> ‘ಭಾರತದ ಜನರಿಗೆ ರೋಗನಿರೋಧಕ ಶಕ್ತಿ ಹೆಚ್ಚು. ಇನ್ನು ಕರ್ನಾಟಕದಲ್ಲಿ ನಾವು ಹೆಚ್ಚು ರಾಗಿ ತಿನ್ನುತ್ತೇವೆ. ಆದರೂ ಕೋವಿಡ್–19 ಸೋಂಕಿನ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಸಲಹೆ ನೀಡಿದರು.</p>.<p>‘ಸಿನಿಮಾ ಶೂಟಿಂಗ್ ಮುಂದುವರಿದಿದೆ. ಭಾನುವಾರ ಶಬರಿಮಲೆಗೆ ಹೋಗುತ್ತಿದ್ದೇನೆ. ನನಗೆ ಯಾವುದೇ ಆತಂಕವಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>‘ಕನ್ನಡ ಸಿನಿಮಾ ರಂಗದಲ್ಲಿ ಎಲ್ಲರೂ ಲೀಡರ್. ಈ ಕ್ಷೇತ್ರದಲ್ಲಿ ನನಗಿಂತ ಹಿರಿಯರಾದ ಅನಂತನಾಗ್, ರವಿಚಂದ್ರನ್ ಇದ್ದಾರೆ. ಸಿನಿಮಾ ನಗರಿ ನಿರ್ಮಾಣ ಸೇರಿದಂತೆ ಉತ್ತಮ ಕೆಲಸಕ್ಕೆ ನನ್ನ ಬೆಂಬಲವಿದೆ. ನಾನೂ ಕೈ ಜೋಡಿಸುತ್ತೇನೆ’ ಎಂದು ನಟ ಶಿವರಾಜ್ಕುಮಾರ್ ಮಂಗಳವಾರ ಇಲ್ಲಿಗೆ ಸಮೀಪದ ನಗುವನಹಳ್ಳಿಯಲ್ಲಿ ಹೇಳಿದರು.</p>.<p>‘ಸಿನಿಮಾ ನಗರಿ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ವಿಚಾರ. ಉತ್ತಮ ಸ್ಥಳದಲ್ಲಿ, ಸರಿಯಾದ ವಿಧಾನದಲ್ಲಿ ಆಗಬೇಕು. ಅವಸರಪಡಬಾರದು. ಇದು ವಿಶ್ವದಲ್ಲೇ ಅತ್ಯುತ್ತಮ ಸಿನಿಮಾ ನಗರಿ ಎನಿಸಿಕೊಳ್ಳಬೇಕು. ಅದಕ್ಕೆ ನಾವು ಕೂಡ ಸಲಹೆ ನೀಡುತ್ತೇವೆ. ಸಿನಿಮಾ ರಂಗಕ್ಕೆ ಹಾಗೂ ಜನರಿಗೆ ಉಪಯೋಗವಾಗುವಂತಿರಬೇಕು’ ಎಂದರು.</p>.<p><strong>ರಾಗಿ ತಿನ್ನುತ್ತೇವೆ:</strong> ‘ಭಾರತದ ಜನರಿಗೆ ರೋಗನಿರೋಧಕ ಶಕ್ತಿ ಹೆಚ್ಚು. ಇನ್ನು ಕರ್ನಾಟಕದಲ್ಲಿ ನಾವು ಹೆಚ್ಚು ರಾಗಿ ತಿನ್ನುತ್ತೇವೆ. ಆದರೂ ಕೋವಿಡ್–19 ಸೋಂಕಿನ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಸಲಹೆ ನೀಡಿದರು.</p>.<p>‘ಸಿನಿಮಾ ಶೂಟಿಂಗ್ ಮುಂದುವರಿದಿದೆ. ಭಾನುವಾರ ಶಬರಿಮಲೆಗೆ ಹೋಗುತ್ತಿದ್ದೇನೆ. ನನಗೆ ಯಾವುದೇ ಆತಂಕವಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>