ಭಾರಿ ಯಶಸ್ಸು ಗಳಿಸುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರೂ ಚಿತ್ರ ಹಿಟ್ ಆಗಲಿಲ್ಲ. ಇತ್ತ ತ್ರಿವಿಕ್ರಮ್ ಶ್ರೀನಿವಾಸ್ ಎರಡು ಚಿತ್ರಗಳ ಮೂಲಕ ಸುದ್ದಿಯಾದರು. ಪವನ್ ಕಲ್ಯಾಣ್ ನಟನೆಯ ‘ಅಜ್ಞಾತವಾಸಿ’, 2018ರಲ್ಲಿ ನೆಲಕಚ್ಚಿದ ಚಿತ್ರಗಳ ಪಟ್ಟಿ ಸೇರಿದರೆ, ಜೂನಿಯರ್ ಎನ್ಟಿಆರ್ ನಾಯಕತ್ವದ ‘ಅರವಿಂದ ಸಮೇತ ವೀರ ರಾಘವ’ ಚಿತ್ರ ಉತ್ತಮ ನಿರ್ವಹಣೆ ತೋರಿ ತ್ರಿವಿಕ್ರಮ್ ಅವರಿಗೆ ಹೊಸ ಚೈತನ್ಯ ನೀಡಿತ್ತು.