ಚಿತ್ರದಲ್ಲಿ ‘ಸೂರ್ಯ’ನಾಗಿ ರಮೇಶ್, ‘ಭೂಮಿ’ಯಾಗಿ ನಟಿ ಹೇಮಾ ಪ್ರಭಾತ್ ಹಾಗೂ ‘ಶಶಾಂಕ್’ ಪಾತ್ರದಲ್ಲಿ ಅಕ್ಷಯ್ ಆನಂದ್ ನಟಿಸಿದ್ದರು. ಈ ಜೋಡಿಯು ಲಕ್ಷಾಂತರ ಸಿನಿ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದಿತ್ತು. ದತ್ತಣ್ಣ, ವೈಶಾಲಿ ಕಾಸರವಳ್ಳಿ ಮತ್ತಿತರರು ತಾರಾಗಣದಲ್ಲಿದ್ದರು.ವಿ.ಮನೋಮೂರ್ತಿ ಸಂಗೀತ ನಿರ್ದೇಶನದ ‘ನೂರು ಜನ್ಮಕೂ...’ ‘ಯಾವ ಮೋಹನ ಮುರಳಿ ಕರೆಯಿತೊ..’ ಹಾಡುಗಳಂತೂ ಇನ್ನೂ ಕನ್ನಡಿಗರ ಅಧರದಲ್ಲಿ ಹಚ್ಚಹಸಿರಾಗಿದೆ.