ಈ ಕುರಿತು ಟ್ವೀಟ್ ಮಾಡಿರುವ ಅನುಷ್ಕಾ, ‘ನೀವೆಲ್ಲರೂ ತೋರಿದ ಒಗ್ಗಟ್ಟಿನ ಮನೋಭಾವದಿಂದ ನಿಜಕ್ಕೂ ಚಕಿತರಾಗಿದ್ದೇವೆ. ನಾವು ಆರಂಭದಲ್ಲಿ ನಿಗದಿಪಡಿಸಿದ್ದ ಗುರಿಗಿಂತಲೂ ಹೆಚ್ಚಿನ ಮೊತ್ತ ಸಂಗ್ರಹವಾಗಿದೆ ಮತ್ತು ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಬಹುದೂರ ಸಾಗಲಿದ್ದೇವೆ ಎಂಬುದನ್ನು ಘೊಷಿಸಲು ಹೆಮ್ಮೆಯಾಗುತ್ತಿದೆ. ದೇಶದ ಜನರಿಗೆ ಸಹಾಯ ಮಾಡುವಲ್ಲಿ ನಿಮ್ಮ ಅಗಾಧ ಬೆಂಬಲಕ್ಕೆ ಧನ್ಯವಾದಗಳು’ ಎಂದು ಉಲ್ಲೇಖಿಸಿದ್ದಾರೆ.