ಬರಗೂರು ಅವರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು 2017ರಲ್ಲಿ ಬಾಲರಾಜ್ ಅವರು ನಿರ್ಮಿಸಿದ್ದರು. ಮೂಕಚಿತ್ರ ಕಲಾವಿದನ ಪಾತ್ರದಲ್ಲಿ ಕುಮಾರ್ ಗೋವಿಂದ್ ನಟಿಸಿದ್ದಾರೆ. ಸೋದರಿ ಪಾತ್ರದಲ್ಲಿ ರೇಖಾ ಅವರು ನಟಿಸಿದ್ದು, ಇತರೆ ಪಾತ್ರಗಳಲ್ಲಿ ಸುಂದರರಾಜ್, ಯತಿರಾಜ್, ಶೀತಲ್ ಶೆಟ್ಟಿ, ವೆಂಕಟರಾಜ್ ಮುಂತಾದವರು ನಟಿಸಿದ್ದಾರೆ.