ಕೆಜಿಎಫ್ ಚಾಪ್ಟರ್ 2: ತಿರುಪತಿ, ಸಿಂಹಾಚಲಂ ದೇಗುಲಗಳಿಗೆ ಯಶ್ ಭೇಟಿ
ಬೆಂಗಳೂರು: ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಲು ನಟ ಯಶ್ ಅವರು ಅನೇಕ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ.
ಆಂಧ್ರ ಪ್ರದೇಶ ಪ್ರವಾಸದ ವೇಳೆ ಅವರು ಸೋಮವಾರ ತಿರುಪತಿ ವೆಂಕಟೇಶ್ವರ ದೇಗುಲ ಹಾಗೂ ವಿಶಾಖಪಟ್ಟಣದ ಸಿಂಹಾಚಲಂ ದೇಗುಲಕ್ಕೆ ಬೇಟಿ ನೀಡಿದ್ದಾರೆ.
ನಟ ಯಶ್ ಧರ್ಮಸ್ಥಳಕ್ಕೆ ಭೇಟಿ: ಕೆ.ಜಿ.ಎಫ್ 2 ಯಶಸ್ಸಿಗಾಗಿ ಪ್ರಾರ್ಥನೆ
#KGFChapter2 star #Yash offers prays at Tirumala Today! #tirupati #tirumala #tirupathi #itsmytirupati #kgf #kgf2 #kgfchapter2 #kgfmovie #yash #yashkgf pic.twitter.com/TZ4IpKFFQ2
— It's My Tirupati (@Itsmytirupati) April 11, 2022
ರಾಕಿಂಗ್ ಸ್ಟಾರ್ ಯಶ್ ಸಂದರ್ಶನ: ಕೆ.ಜಿ.ಎಫ್... ಕರ್ನಾಟಕದ ಹೆಮ್ಮೆ
ಇದೇ 14ರಂದು ಸಿನಿಮಾ ತೆರೆಗೆ ಬರಲಿದ್ದು, ಅದ್ದೂರಿ ಬಿಡುಗಡೆಗೆ ಸಿದ್ಧತೆ ಭರದಿಂದ ಸಾಗಿದೆ. ಸಿನಿಮಾವು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಏಪ್ರಿಲ್ 10ರಂದು ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇಗುಲಗಳಿಗೆ ಚಿತ್ರತಂಡ ಸಮೇತ ಭೇಟಿ ನೀಡಿದ್ದ ಯಶ್, ಚಿತ್ರದ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಲು ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದು ಹೇಳಿದ್ದರು.
ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2: ‘ಜೆರ್ಸಿ’ ಬಿಡುಗಡೆ ಮುಂದೂಡಿಕೆ
ಕೆಜಿಎಫ್ ಚಾಪ್ಟರ್ 2 ಬಿಡುಗಡೆಯ ಕಾರಣ ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ಬಿಡುಗಡೆ ದಿನಾಂಕವನ್ನು ಏಪ್ರಿಲ್ 22ಕ್ಕೆ ಮುಂದೂಡಲಾಗಿದೆ ಎಂದು ನಿರ್ಮಾಪಕ ಅಮನ್ ಗಿಲ್ ಸೋಮವಾರ ತಿಳಿಸಿದ್ದರು.
#Rocking 🌟 @TheNameIsYash seeks the blessings at #SimhachalamTemple in #Vizag as his movie #KGFChapter2 gears up for release this April 14th.#KGF2onApr14 @prashanth_neel @SrinidhiShetty7 @hombalefilms @VaaraahiCC @shreyasgroup @shreyasmedia @KGFTheFilm pic.twitter.com/93weJEOMuC
— Vamsi Kaka (@vamsikaka) April 11, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.