<p><strong>ಲಖನೌ:</strong> ಬಾಂಗ್ಲಾದೇಶದ ಕ್ರಿಕೆಟಿಗನನ್ನು ತನ್ನ ಐಪಿಎಲ್ ತಂಡಕ್ಕೆ ಖರೀದಿಸಿದ ಬಾಲಿವುಡ್ ನಟ ಶಾರುಕ್ ಖಾನ್ ಅವರ ನಾಲಿಗೆ ಕತ್ತರಿಸಿದವರಿಗೆ ₹1 ಲಕ್ಷ ನಗದು ಬಹುಮಾನ ನೀಡುವುದಾಗಿ ಹಿಂದೂ ಪರ ಸಂಘಟನೆಯ ನಾಯಕಿಯೊಬ್ಬರು ಘೋಷಿಸಿದ್ದಾರೆ.</p><p>ಕ್ರಿಕೆಟಿಗ ಮುಸ್ತಾಫಿಝೂರ್ ರೆಹಮಾನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದನ್ನು ಅಖಿಲ ಭಾರತ ಹಿಂದೂ ಮಹಾಸಭಾದ ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷೆ ಮೀರಾ ಠಾಕೂರ್ ವಿರೋಧಿಸಿದ್ದಾರೆ. ಶಾರುಕ್ ಖಾನ್ ಚಿತ್ರವಿದ್ದ ಪೋಸ್ಟರ್ಗೆ ಮಸಿ ಬಳಿದು, ಚಪ್ಪಲಿಯಲ್ಲಿ ಹೊಡೆದಿದ್ದಾರೆ.</p><p>‘ನಮ್ಮ ಹಿಂದೂ ಸಹೋದರರು ಬಾಂಗ್ಲಾದಲ್ಲಿ ಜೀವಂತವಾಗಿ ದಹನವಾಗುತ್ತಿದ್ದಾರೆ. ಆದರೆ ಶಾರುಕ್ ಅಲ್ಲಿನ ಆಟಗಾರರನ್ನು ಖರೀದಿಸುತ್ತಿದ್ದಾರೆ. ನಾವಿದನ್ನು ಒಪ್ಪುವುದಿಲ್ಲ’ ಎಂದು ಮೀರಾ ಹೇಳಿದ್ದಾರೆ.</p><p>ಐಪಿಎಲ್ ತಂಡಕ್ಕೆ ರೆಹಮಾನ್ ಸೇರ್ಪಡೆಯನ್ನು ಅಯೋಧ್ಯೆ ಮತ್ತು ಇತರ ಭಾಗಗಳ ಹಲವು ಸ್ವಾಮೀಜಿಗಳು ವಿರೋಧಿಸಿದ್ದಾರೆ.</p><p>‘ಬಾಂಗ್ಲಾ ಕ್ರಿಕೆಟಿಗರು ಅಲ್ಲಿನ ಹಿಂದೂಗಳ ಸುರಕ್ಷತೆ ಬಗ್ಗೆ ಧ್ವನಿ ಎತ್ತಬೇಕು’ ಎಂದು ಪ್ರಸಿದ್ಧ ಕಥಾವಾಚಕ ಧೀರೇಂದ್ರ ಶಾಸ್ತ್ರಿ ಅವರು ಆಗ್ರಹಿಸಿದ್ದಾರೆ.</p><p>‘ಅವನು ನಾಯಕನಲ್ಲ, ಅವನಿಗೆ ಆ ಗುಣಗಳಿಲ್ಲ’ ಎಂದು ಪ್ರಸಿದ್ಧ ಯತಿ ಸ್ವಾಮಿ ರಾಮಭದ್ರಾಚಾರ್ಯ ಅವರು ಶಾರುಕ್ ಅವರನ್ನು ಟೀಕಿಸಿದ್ದಾರೆ.</p><p>‘ಜನರಿಂದಾಗಿ ಶಾರುಕ್ ಖಾನ್ಗೆ ಖ್ಯಾತಿ ಬಂದಿದೆ. ಜನರ ಭಾವನೆಗಳನ್ನು ಅವರು ಗೌರವಿಸಬೇಕು’ ಎಂದು ಅಖಿಲ ಭಾರತೀಯ ಆಖಾಡ ಪರಿಷತ್ ಅಧ್ಯಕ್ಷ ಮಹಾಂತ್ ರವೀಂದ್ರ ಪುರಿ ಅವರು ಆಗ್ರಹಿಸಿದ್ದಾರೆ.</p><p>ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸಂತ ದಿನೇಶ್ ಫಲಹಾರಿ ಮಹಾರಾಜ್ ಅವರು, ’ಶಾರುಕ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರನ್ನು ಬಾಂಗ್ಲಾಕ್ಕೆ ಕಳುಹಿಸಬೇಕು’ ಎಂದು ಒತ್ತಾಯಿಸಿದ್ದಾರೆ. </p><p>ಇದೇ ಕಾರಣಕ್ಕೆ ಬಿಜೆಪಿ ಹಿರಿಯ ನಾಯಕ, ಶಾಸಕ ಸಂಗೀತ್ ಸೋಮ್ ಅವರು ಶಾರುಕ್ ಖಾನ್ ಅವರನ್ನು ‘ದೇಶದ್ರೋಹಿ’ ಎಂದು ಇತ್ತೀಚೆಗೆ ಕರೆದಿದ್ದರು.</p>.KKR ಮಾಲೀಕ ಶಾರುಖ್ ಖಾನ್ ದೇಶದ್ರೋಹಿ ಎಂದು ಬಿಜೆಪಿ ನಾಯಕ ಆಕ್ರೋಶ.ಸೂಪರ್ಸ್ಟಾರ್ ರಜನಿಕಾಂತ್ ಅಭಿಮಾನಿ ಶಾರೂಕ್ ಖಾನ್!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಬಾಂಗ್ಲಾದೇಶದ ಕ್ರಿಕೆಟಿಗನನ್ನು ತನ್ನ ಐಪಿಎಲ್ ತಂಡಕ್ಕೆ ಖರೀದಿಸಿದ ಬಾಲಿವುಡ್ ನಟ ಶಾರುಕ್ ಖಾನ್ ಅವರ ನಾಲಿಗೆ ಕತ್ತರಿಸಿದವರಿಗೆ ₹1 ಲಕ್ಷ ನಗದು ಬಹುಮಾನ ನೀಡುವುದಾಗಿ ಹಿಂದೂ ಪರ ಸಂಘಟನೆಯ ನಾಯಕಿಯೊಬ್ಬರು ಘೋಷಿಸಿದ್ದಾರೆ.</p><p>ಕ್ರಿಕೆಟಿಗ ಮುಸ್ತಾಫಿಝೂರ್ ರೆಹಮಾನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದನ್ನು ಅಖಿಲ ಭಾರತ ಹಿಂದೂ ಮಹಾಸಭಾದ ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷೆ ಮೀರಾ ಠಾಕೂರ್ ವಿರೋಧಿಸಿದ್ದಾರೆ. ಶಾರುಕ್ ಖಾನ್ ಚಿತ್ರವಿದ್ದ ಪೋಸ್ಟರ್ಗೆ ಮಸಿ ಬಳಿದು, ಚಪ್ಪಲಿಯಲ್ಲಿ ಹೊಡೆದಿದ್ದಾರೆ.</p><p>‘ನಮ್ಮ ಹಿಂದೂ ಸಹೋದರರು ಬಾಂಗ್ಲಾದಲ್ಲಿ ಜೀವಂತವಾಗಿ ದಹನವಾಗುತ್ತಿದ್ದಾರೆ. ಆದರೆ ಶಾರುಕ್ ಅಲ್ಲಿನ ಆಟಗಾರರನ್ನು ಖರೀದಿಸುತ್ತಿದ್ದಾರೆ. ನಾವಿದನ್ನು ಒಪ್ಪುವುದಿಲ್ಲ’ ಎಂದು ಮೀರಾ ಹೇಳಿದ್ದಾರೆ.</p><p>ಐಪಿಎಲ್ ತಂಡಕ್ಕೆ ರೆಹಮಾನ್ ಸೇರ್ಪಡೆಯನ್ನು ಅಯೋಧ್ಯೆ ಮತ್ತು ಇತರ ಭಾಗಗಳ ಹಲವು ಸ್ವಾಮೀಜಿಗಳು ವಿರೋಧಿಸಿದ್ದಾರೆ.</p><p>‘ಬಾಂಗ್ಲಾ ಕ್ರಿಕೆಟಿಗರು ಅಲ್ಲಿನ ಹಿಂದೂಗಳ ಸುರಕ್ಷತೆ ಬಗ್ಗೆ ಧ್ವನಿ ಎತ್ತಬೇಕು’ ಎಂದು ಪ್ರಸಿದ್ಧ ಕಥಾವಾಚಕ ಧೀರೇಂದ್ರ ಶಾಸ್ತ್ರಿ ಅವರು ಆಗ್ರಹಿಸಿದ್ದಾರೆ.</p><p>‘ಅವನು ನಾಯಕನಲ್ಲ, ಅವನಿಗೆ ಆ ಗುಣಗಳಿಲ್ಲ’ ಎಂದು ಪ್ರಸಿದ್ಧ ಯತಿ ಸ್ವಾಮಿ ರಾಮಭದ್ರಾಚಾರ್ಯ ಅವರು ಶಾರುಕ್ ಅವರನ್ನು ಟೀಕಿಸಿದ್ದಾರೆ.</p><p>‘ಜನರಿಂದಾಗಿ ಶಾರುಕ್ ಖಾನ್ಗೆ ಖ್ಯಾತಿ ಬಂದಿದೆ. ಜನರ ಭಾವನೆಗಳನ್ನು ಅವರು ಗೌರವಿಸಬೇಕು’ ಎಂದು ಅಖಿಲ ಭಾರತೀಯ ಆಖಾಡ ಪರಿಷತ್ ಅಧ್ಯಕ್ಷ ಮಹಾಂತ್ ರವೀಂದ್ರ ಪುರಿ ಅವರು ಆಗ್ರಹಿಸಿದ್ದಾರೆ.</p><p>ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸಂತ ದಿನೇಶ್ ಫಲಹಾರಿ ಮಹಾರಾಜ್ ಅವರು, ’ಶಾರುಕ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರನ್ನು ಬಾಂಗ್ಲಾಕ್ಕೆ ಕಳುಹಿಸಬೇಕು’ ಎಂದು ಒತ್ತಾಯಿಸಿದ್ದಾರೆ. </p><p>ಇದೇ ಕಾರಣಕ್ಕೆ ಬಿಜೆಪಿ ಹಿರಿಯ ನಾಯಕ, ಶಾಸಕ ಸಂಗೀತ್ ಸೋಮ್ ಅವರು ಶಾರುಕ್ ಖಾನ್ ಅವರನ್ನು ‘ದೇಶದ್ರೋಹಿ’ ಎಂದು ಇತ್ತೀಚೆಗೆ ಕರೆದಿದ್ದರು.</p>.KKR ಮಾಲೀಕ ಶಾರುಖ್ ಖಾನ್ ದೇಶದ್ರೋಹಿ ಎಂದು ಬಿಜೆಪಿ ನಾಯಕ ಆಕ್ರೋಶ.ಸೂಪರ್ಸ್ಟಾರ್ ರಜನಿಕಾಂತ್ ಅಭಿಮಾನಿ ಶಾರೂಕ್ ಖಾನ್!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>