<p><strong>ಮುಂಬೈ:</strong> ‘ಜಾನೇ ಭಿ ದೋ ಯಾರೋ’ದಂತಹ ಐತಿಹಾಸಿಕ ಸಿನಿಮಾದ ಹಾಸ್ಯಪಾತ್ರ ದಿಂದ ಹೆಸರುವಾಸಿಯಾಗಿದ್ದ, ‘ಯೇ ಜೋ ಹೈ ಜಿಂದಗಿ’, ‘ಸಾರಾಭಾಯಿ ವರ್ಸಸ್ ಸಾರಾಭಾಯಿ’ ಟೆಲಿವಿಷನ್ ಧಾರವಾಹಿಗಳ ಮೂಲಕ ಮನೆಮಾತಾಗಿದ್ದ ಹಿರಿಯ ನಟ ಸತೀಶ್ ಶಾ ಅವರು ಶನಿವಾರ<br>ಕೊನೆಯುಸಿರೆಳೆದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.</p>.<p>ಹಾಸ್ಯನಟ ಗೋವರ್ಧನ್ ಅಸರಾನಿ, ಜಾಹೀರಾತು ನಿರೂಪಕ ಪೀಯೂಷ್ ಪಾಂಡೆ ನಿಧನರಾದ ಕೆಲವು ದಿನಗಳಲ್ಲಿ ಮತ್ತೊಬ್ಬ ನಟನನ್ನು ಕಳೆದುಕೊಂಡಂತಾಗಿದೆ.</p>.<p>ಸತೀಶ್ ಶಾ ನಿಧನವಾಗಿರುವುದನ್ನು ಸಿನಿ ಹಾಗೂ ಟಿವಿ ಕಲಾವಿದರ ಒಕ್ಕೂಟ, ಭಾರತೀಯ ಸಿನಿಮಾ ನಿರ್ದೇಶಕರ ಒಕ್ಕೂಟ ಹಾಗೂ ಅಖಿಲ ಭಾರತೀಯ ಸಿನಿಮಾ ಕಲಾವಿದರ ಒಕ್ಕೂಟವು ಖಚಿತಪಡಿಸಿದೆ.</p>.<p>‘ಸತೀಶ್ ಅವರ ನಿಧನಕ್ಕೆ ತೀವ್ರ ಸಂತಾಪ ಸಲ್ಲಿಸುತ್ತಿದ್ದೇವೆ. 1985ರಿಂದಲೂ ಸಂಘದ ಸಕ್ರಿಯ ಸದಸ್ಯರಾಗಿ<br>ಕಾರ್ಯನಿರ್ವಹಿಸುತ್ತಿದ್ದರು’ ಎಂದು ಒಕ್ಕೂಟವು ತಿಳಿಸಿದೆ.</p>.<p>‘ಅವರು ಹೃದಯಾಘಾತದಿಂದ ನಿಧನರಾದರು ಎಂದು ತೋರುತ್ತದೆ. ಆದರೂ ಅವರ ಸಾವಿನ ಕುರಿತು ವೈದ್ಯರ ಅಂತಿಮ ವರದಿಯನ್ನು ಎದುರು ನೋಡುತ್ತಿದ್ದೇವೆ’ ಎಂದು ಅವರ ಸಹಾಯಕ ಆಪ್ತ ಸಹಾಯಕ ರಮೇಶ್ ಕಡತಲಾ ತಿಳಿಸಿದ್ದಾರೆ.</p>.ರಾಜು ತಾಳಿಕೋಟೆ ಜೊತೆ ಮಾಡಿದ ಕೆಲಸ ಎಂದಿಗೂ ಮರೆಯಲಾಗದು: ನಟ ಸಾಧು ಕೋಕಿಲ.<p>ಸತೀಶ್ ಶಾ ನಿಧನಕ್ಕೆ ನಿರ್ಮಾಪಕ ಅಶೋಕ್ ಪಂಡಿತ್ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಅವರು, ‘ಪ್ರಸಿದ್ಧ ನಟ ಮತ್ತು ಮಹಾನ್ ವ್ಯಕ್ತಿ ಸತೀಶ್ ಶಾ ಮೂತ್ರಪಿಂಡ ವೈಫಲ್ಯದಿಂದ ನಿಧನರಾಗಿರುವ ಸುದ್ದಿ ತಿಳಿದು ದುಃಖವಾಗುತ್ತಿದೆ. ಅವರ ನಿಧನ ಚಿತ್ರೋದ್ಯಮಕ್ಕೆ ದೊಡ್ಡ ನಷ್ಟ‘ ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ‘ಜಾನೇ ಭಿ ದೋ ಯಾರೋ’ದಂತಹ ಐತಿಹಾಸಿಕ ಸಿನಿಮಾದ ಹಾಸ್ಯಪಾತ್ರ ದಿಂದ ಹೆಸರುವಾಸಿಯಾಗಿದ್ದ, ‘ಯೇ ಜೋ ಹೈ ಜಿಂದಗಿ’, ‘ಸಾರಾಭಾಯಿ ವರ್ಸಸ್ ಸಾರಾಭಾಯಿ’ ಟೆಲಿವಿಷನ್ ಧಾರವಾಹಿಗಳ ಮೂಲಕ ಮನೆಮಾತಾಗಿದ್ದ ಹಿರಿಯ ನಟ ಸತೀಶ್ ಶಾ ಅವರು ಶನಿವಾರ<br>ಕೊನೆಯುಸಿರೆಳೆದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.</p>.<p>ಹಾಸ್ಯನಟ ಗೋವರ್ಧನ್ ಅಸರಾನಿ, ಜಾಹೀರಾತು ನಿರೂಪಕ ಪೀಯೂಷ್ ಪಾಂಡೆ ನಿಧನರಾದ ಕೆಲವು ದಿನಗಳಲ್ಲಿ ಮತ್ತೊಬ್ಬ ನಟನನ್ನು ಕಳೆದುಕೊಂಡಂತಾಗಿದೆ.</p>.<p>ಸತೀಶ್ ಶಾ ನಿಧನವಾಗಿರುವುದನ್ನು ಸಿನಿ ಹಾಗೂ ಟಿವಿ ಕಲಾವಿದರ ಒಕ್ಕೂಟ, ಭಾರತೀಯ ಸಿನಿಮಾ ನಿರ್ದೇಶಕರ ಒಕ್ಕೂಟ ಹಾಗೂ ಅಖಿಲ ಭಾರತೀಯ ಸಿನಿಮಾ ಕಲಾವಿದರ ಒಕ್ಕೂಟವು ಖಚಿತಪಡಿಸಿದೆ.</p>.<p>‘ಸತೀಶ್ ಅವರ ನಿಧನಕ್ಕೆ ತೀವ್ರ ಸಂತಾಪ ಸಲ್ಲಿಸುತ್ತಿದ್ದೇವೆ. 1985ರಿಂದಲೂ ಸಂಘದ ಸಕ್ರಿಯ ಸದಸ್ಯರಾಗಿ<br>ಕಾರ್ಯನಿರ್ವಹಿಸುತ್ತಿದ್ದರು’ ಎಂದು ಒಕ್ಕೂಟವು ತಿಳಿಸಿದೆ.</p>.<p>‘ಅವರು ಹೃದಯಾಘಾತದಿಂದ ನಿಧನರಾದರು ಎಂದು ತೋರುತ್ತದೆ. ಆದರೂ ಅವರ ಸಾವಿನ ಕುರಿತು ವೈದ್ಯರ ಅಂತಿಮ ವರದಿಯನ್ನು ಎದುರು ನೋಡುತ್ತಿದ್ದೇವೆ’ ಎಂದು ಅವರ ಸಹಾಯಕ ಆಪ್ತ ಸಹಾಯಕ ರಮೇಶ್ ಕಡತಲಾ ತಿಳಿಸಿದ್ದಾರೆ.</p>.ರಾಜು ತಾಳಿಕೋಟೆ ಜೊತೆ ಮಾಡಿದ ಕೆಲಸ ಎಂದಿಗೂ ಮರೆಯಲಾಗದು: ನಟ ಸಾಧು ಕೋಕಿಲ.<p>ಸತೀಶ್ ಶಾ ನಿಧನಕ್ಕೆ ನಿರ್ಮಾಪಕ ಅಶೋಕ್ ಪಂಡಿತ್ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಅವರು, ‘ಪ್ರಸಿದ್ಧ ನಟ ಮತ್ತು ಮಹಾನ್ ವ್ಯಕ್ತಿ ಸತೀಶ್ ಶಾ ಮೂತ್ರಪಿಂಡ ವೈಫಲ್ಯದಿಂದ ನಿಧನರಾಗಿರುವ ಸುದ್ದಿ ತಿಳಿದು ದುಃಖವಾಗುತ್ತಿದೆ. ಅವರ ನಿಧನ ಚಿತ್ರೋದ್ಯಮಕ್ಕೆ ದೊಡ್ಡ ನಷ್ಟ‘ ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>