ಇದು ಕೆಲವು ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಣ್ಣು ಕೆಂಪಗಾಗಿಸಿದೆ. ಇಲ್ಲಿ ಸಾಧುಗಳೇ ಏಕಿದ್ದಾರೆ? ಮುಸ್ಲಿಂ ಮೌಲ್ವಿ, ಮೌಲಾನಾ, ಮುಲ್ಲಾಗಳು ಏಕಿಲ್ಲ? ಪದೇ ಪದೇ ಹಿಂದೂ ಸಾಧು ಸಂತರನ್ನು ಬಾಲಿವುಡ್ ಸದಾ ಅಣಕಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. #ಬಾಯ್ಕಾಟ್ ಬಾಲಿವುಡ್ ಹೆಸರಿನಲ್ಲಿ ಈ ಆಕ್ರೋಶ ಟ್ವಿಟರ್ನಲ್ಲಿ ಹರಿದಾಡುತ್ತಿದೆ. ‘ಭೂತ್ ಪೊಲೀಸ್’ ಚಿತ್ರದಲ್ಲಿ ಅರ್ಜುನ್ ಕಪೂರ್, ಜಾಕ್ವೆಲಿನ್ ಫೆರ್ನಾಂಡಿಸ್, ಯಾಮಿ ಗೌತಮ್ ತಾರಾಗಣದಲ್ಲಿ ಇದ್ದಾರೆ.