ಈ ಕುರಿತಂತೆ ಹಿಂದೂಸ್ಥಾನ್ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿರುವ ಅವರು,‘ನಮ್ಮ ಸಂಬಂಧದ ಅಂತ್ಯವು ಇಬ್ಬರಿಗೂ ಅತ್ಯಂತ ಮುಖ್ಯವಾದುದ್ದಾಗಿದೆ. ಆ ಮೂಲಕ ನಾವುಗಳು ನಮ್ಮ ಜೀವನದಲ್ಲಿ ಮುಂದುವರಿಯಬಹುದು. ನಮ್ಮ ಸ್ನೇಹ ಯಾವಾಗಲೂ ಇರುತ್ತದೆ. ಈ ವಯಸ್ಸಿನಲ್ಲಿ ಕುಳಿತು ನನ್ನ ಜೀವನದಲ್ಲಿ ಆದ ಭಯಾನಕ ವಿಷಯದ ಬಗ್ಗೆ ಯೋಚಿಸಲು ಪ್ರಾರಂಭಿಸಿದರೆ, ನಿಜವಾಗಿಯೂ ನನ್ನ ಜೀವನ ವ್ಯರ್ಥವಾಗಿದೆ. ನಾನು ಪ್ರತಿಯೊಂದು ಸಂಬಂಧದಿಂದಲೂ ಕಲಿತಿದ್ದೇನೆ. ಆದ್ದರಿಂದ, ನಮ್ಮ ಸತ್ಯದ ಬಗ್ಗೆ ಮಾತನಾಡಲು ಸಾಧ್ಯವಾಗುವುದು ಸುಂದರವಾದ ವಿಷಯ’ಎಂದು ಅವರು ಹೇಳಿದರು.