ಚಿತ್ರ ಬಿಡುಗಡೆಯಾಗುವವರೆಗೂ ಸುಮ್ಮನಿದ್ದ ನಾನಿ, ಹಾಸ್ಯ ಸನ್ನಿವೇಶವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಬಡ ರೋಗಿಗಳ ಬಗ್ಗೆ ಪೂರ್ವಗ್ರಹ ಹೊಂದಿರುವ ಡಾ. ಭಾರದ್ವಾಜ್ (ರಾವ್ ರಮೇಶ್) ಜೊತೆ ಸಂಭಾಷಣೆ ನಡೆಸುವ ಸನ್ನಿವೇಶ ಅದಾಗಿದೆ. ‘ಡಾ.ದಾಸ್ನ ಮುಗ್ಧತೆಯನ್ನು ಮೆಚ್ಚಿಕೊಂಡ ಪ್ರೇಕ್ಷಕರಿಗೆ, ಕತ್ತರಿ ಹಾಕಲಾದ ದೃಶ್ಯವನ್ನು ತೋರಿಸಬೇಕು ಎಂದು ನಾವು ತೀರ್ಮಾನಿಸಿದೆವು. ಡಾ. ದಾಸ್, ಡಾ. ಭಾರದ್ವಾಜ್ಗೆ ಉತ್ತರ ಕೊಡುತ್ತಿದ್ದಾರೆ ನೋಡಿ’ ಎಂಬ ಟಿಪ್ಪಣಿಯನ್ನೂ ಕೊಟ್ಟಿದ್ದಾರೆ.