ಗೌರಿ ಕುಂಡದಿಂದ ಕೇದಾರನಾಥ ವರೆಗಿನ 14 ಕಿ.ಮೀ. ಹಾದಿಯಲ್ಲಿ ಭಕ್ತಾದಿಗಳನ್ನು ಹೆಗಲ ಮೇಲೆ ಹೊತ್ತು ಸಾಗುವ ಮುಸ್ಲಿಂ ಯುವಕನ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅಭಿನಯಿಸಿದ್ದಾರೆ. ಯಾತ್ರೆಯ ಸಮಯದಲ್ಲಿ ತನ್ನ ಗ್ರಾಹಕರನ್ನು ಅತ್ಯಂತ ಕಾಳಜಿಯಿಂದ ಕಾಣುವ, ಶ್ರಮ ಪಟ್ಟು ದುಡಿಯುವ, ಸದಾ ಉಲ್ಲಾಸಿತನಾಗಿರುವವ ಮನ್ಸೂರ್.