ಕೇರಳದ ಮಾದರಿಯಲ್ಲಿ ಸರ್ಕಾರ ಯಾವುದೇ ಸಮಿತಿ ರಚಿಸುವುದು ಬೇಡ. ಸಮಸ್ಯೆಗಳನ್ನು ನೇರವಾಗಿ ನಮ್ಮ ಬಳಿ ಧೈರ್ಯವಾಗಿ ಹೇಳಿಕೊಂಡರೆ ಖಂಡಿತವಾಗಿಯೂ ನ್ಯಾಯ ಒದಗಿಸುತ್ತೇವೆ. ಸಮಿತಿ ರಚಿಸಿದರೆ ಚಿತ್ರರಂಗ ಬಹಳ ತೊಂದರೆಗೆ ಸಿಲುಕಿಕೊಳ್ಳಲಿದೆಸಾ.ರಾ.ಗೋವಿಂದು ನಿರ್ಮಾಪಕ
ಈ ರೀತಿ ಸಮಿತಿ ರಚನೆಯಾದಾಗ ಸಿನಿಮಾರಂಗಕ್ಕೆ ವ್ಯಾವಹಾರಿಕವಾಗಿ ಸಮಸ್ಯೆಯಾಗಲಿದೆ. ಕೇರಳದ ರೀತಿಯಲ್ಲಿ ಪ್ರಕರಣಗಳು ಹೊರಬರಲಿವೆ ಎಂಬುದಕ್ಕೆ ವಿರೋಧಿಸುತ್ತಿಲ್ಲರಾಕ್ಲೈನ್ ವೆಂಕಟೇಶ್ ನಿರ್ಮಾಪಕ ನಾವಿನ್ನೂ ಕಾರ್ಮಿಕ ಕಾಯ್ದೆಯಡಿಯೇ ಇದ್ದೇವೆ. ನಮ್ಮದು ಚಿತ್ರರಂಗವಾಗಿದೆ ಹೊರತು ಉದ್ಯಮವಾಗಿಲ್ಲ. ಉದ್ಯಮ ಎಂದು ಘೋಷಣೆಯಾದರೆ ಎಲ್ಲ ಸೌಲಭ್ಯಗಳು ದೊರಕುತ್ತವೆತಾರಾ ನಟಿ
ನಮಗೆ ಸಭೆಯಲ್ಲಿ ಮಾತನಾಡಲು ಅವಕಾಶ ನೀಡಿಲ್ಲ. ಇಂತಹ ಸಮಸ್ಯೆ ನಾಲ್ಕೈದು ವರ್ಷದ ಹಿಂದೆ ಬಂದಾಗ ಕೈಕುಲುಕಿ ಬಗೆಹರಿಸಿಕೊಳ್ಳಿ ಎಂದಿದ್ದರು. ಇಂತಹ ನಡೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆಗೆ ನಮ್ಮ ಒತ್ತಡ ಮುಂದುವರಿಯಲಿದೆಕವಿತಾ ಲಂಕೇಶ್ ನಿರ್ದೇಶಕಿ
ಕನ್ನಡ ಚಿತ್ರರಂಗದಷ್ಟು ಒಳ್ಳೆಯ ಚಿತ್ರರಂಗ ಬೇರೆಲ್ಲೂ ಇಲ್ಲ. ಚಂದನವನದಲ್ಲಿ ಮಹಿಳಾ ಕಲಾವಿದರ ಸಂಸ್ಥೆ ಆಗಬೇಕು. ಚಿತ್ರರಂಗಕ್ಕೆ ಬರುವ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಇದರ ಮೂಲಕ ಜಾಗೃತಿ ಮೂಡಿಸಬೇಕುಸಂಜನಾ ಗಲ್ರಾನಿ ನಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.