ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚನೆಗೆ ಚಲನಚಿತ್ರ ಮಂಡಳಿಗೆ ಸೂಚನೆ

Published : 17 ಸೆಪ್ಟೆಂಬರ್ 2024, 0:05 IST
Last Updated : 17 ಸೆಪ್ಟೆಂಬರ್ 2024, 0:05 IST
ಫಾಲೋ ಮಾಡಿ
Comments
‘ನಿರ್ಮಾಪಕರೊಬ್ಬರು ಗೋವಾಕ್ಕೆ ಕರೆದಿದ್ದರು’
‘ಮಹಿಳಾ ಆಯೋಗವು ಇಲ್ಲಿಗೆ ಬಂದಿದ್ದೇ ಮಹಿಳೆಯರ ಸಮಸ್ಯೆಗಳನ್ನು ಕೇಳಲು. ಆದರೆ ‘ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಏನಿಲ್ಲ. ನಾವು ಹಲವು ವರ್ಷಗಳಿಂದ ಇದ್ದೇವೆ’ ಎಂಬ ಮಾತು ಕೆಲವರಿಂದ ಸಭೆಯಲ್ಲಿ ಕೇಳಿಬಂತು. ‘ನಿಮಗೇನೂ ಆಗಿಲ್ಲ ಅದು ಒಳ್ಳೆಯದು. ಆದರೆ ನನಗೆ ಕೆಟ್ಟ ಅನುಭವ ಆಗಿದೆ ಎಂದು ನಾನು ಅವರಿಗೆ ಉತ್ತರಿಸಿದೆ. ಇದಕ್ಕೆ ಪೂರಕವಾಗಿ ನಾನು ಸಂದರ್ಭವೊಂದನ್ನು ವಿವರಿಸಿದೆ. ಒಮ್ಮೆ ನಮ್ಮ ತಂಡದ ಸಿನಿಮಾದ ಸ್ಕ್ರಿಪ್ಟ್‌ ಒಂದನ್ನು ಪಿಚ್‌ ಮಾಡಲು ನಿರ್ಮಾಪಕರೊಬ್ಬರಿಗೆ ಕರೆ ಮಾಡಿದಾಗ ಅವರು ನನ್ನನ್ನು ಗೋವಾಕ್ಕೆ ಕರೆದಿದ್ದರು. ರಾಜ್ಯ ಪ್ರಶಸ್ತಿ ವಿಜೇತ ನಟಿಗೇ ಹೀಗೆ ಹೇಳಿದರೆ ಇನ್ನು ಹೊಸ ಹೆಣ್ಣುಮಗಳೊಬ್ಬಳು ನಿರ್ದೇಶಕಿಯಾಗುವ ಕನಸು ಕಂಡರೆ ಅವರಿಗೂ ಹೀಗೆ ಕೇಳುತ್ತಾರೆ ಅಲ್ಲವೇ ಎಂದೆ. ಸಮಿತಿ ರಚನೆಯಾಗಿ ತನಿಖೆಯಾದರೆ ಖಂಡಿತಾ ಆ ನಿರ್ಮಾಪಕರ ಹೆಸರು ಹೇಳುತ್ತೇನೆ.  ಪ್ರತಿರೋಧ ಕೇಳಿಬಂದರೂ ಕೊನೆಯಲ್ಲಿ ನಾನು ಮಾತನಾಡಿದೆ. ನಾನೊಂದು ಚೆಕ್‌ಬೌನ್ಸ್‌ ಪ್ರಕರಣಕ್ಕೆ ಕೆಎಫ್‌ಸಿಸಿ ಮೆಟ್ಟಲೇರಿದಾಗ ನನಗೆ ಸಹಾಯ ಸಿಗಲಿಲ್ಲ. ಇಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇವೆ‘ ಎಂದು ನಟಿ ನೀತು ಶೆಟ್ಟಿ ಹೇಳಿದ್ದಾರೆ. ‘ನಾನು ಸಭೆಯಲ್ಲಿ ಮಾತನಾಡುತ್ತಿರಬೇಕಾದರೆ ‘ನೀನು ಕೂತ್ಕೊಮ್ಮ. ನೀನು ಫೈರ್‌ ಇಂದ ಬಂದಿದ್ಯಾ’ ಎಂದು ಸಾ.ರಾ.ಗೋವಿಂದ್‌ ಅವರು ಹೇಳಿದರು. ನಾನು ಎಲ್ಲಿಂದಾದರೂ ಬಂದಿರಲಿ. ನಾನು ನಿಜವನ್ನೇ ಹೇಳುತ್ತಿದ್ದೇನಲ್ಲ. ನನ್ನ ಧ್ವನಿಯನ್ನೇ ಅಡಗಿಸಲು ಯತ್ನಿಸಿದರು. ಚಿತ್ರರಂಗದಲ್ಲಿ ಖಂಡಿತವಾಗಿಯೂ ಶೋಷಣೆ ಇದೆ. ನಾನು ಕೆಲಸ ಮಾಡಿದ್ದ ಸಿನಿಮಾದ ಇಬ್ಬರು ನಿರ್ಮಾಪಕರು ಸಭೆಯಲ್ಲಿ ಇದ್ದರು. ಅವರ ಸೆಟ್‌ನಲ್ಲೇ ನಾಯಕ ನಟರು ನನ್ನ ಕುರಿತು ಕೆಟ್ಟದಾಗಿ ಮಾತನಾಡಿದ್ದಾರೆ. ಈ ವರ್ತನೆ ಸರಿಯಲ್ಲ. ಇವತ್ತಿನ ಸಭೆಯಲ್ಲಿ ನಾನು ಕೆಲ ಘಟನೆಗಳನ್ನು ಹೇಳಿದ್ದೇನೆ. ತನಿಖೆಯ ವೇಳೆಯಲ್ಲಿ ಹೆಸರು ಅವಶ್ಯವಿದ್ದರೆ ಹೇಳುತ್ತೇನೆ’ ಎಂದು ನೀತು ಶೆಟ್ಟಿ ಹೇಳಿದರು.
ಕೇರಳದ ಮಾದರಿಯಲ್ಲಿ ಸರ್ಕಾರ ಯಾವುದೇ ಸಮಿತಿ ರಚಿಸುವುದು ಬೇಡ. ಸಮಸ್ಯೆಗಳನ್ನು ನೇರವಾಗಿ ನಮ್ಮ ಬಳಿ ಧೈರ್ಯವಾಗಿ ಹೇಳಿಕೊಂಡರೆ ಖಂಡಿತವಾಗಿಯೂ ನ್ಯಾಯ ಒದಗಿಸುತ್ತೇವೆ. ಸಮಿತಿ ರಚಿಸಿದರೆ ಚಿತ್ರರಂಗ ಬಹಳ ತೊಂದರೆಗೆ ಸಿಲುಕಿಕೊಳ್ಳಲಿದೆ
ಸಾ.ರಾ.ಗೋವಿಂದು ನಿರ್ಮಾಪಕ
ಈ ರೀತಿ ಸಮಿತಿ ರಚನೆಯಾದಾಗ ಸಿನಿಮಾರಂಗಕ್ಕೆ ವ್ಯಾವಹಾರಿಕವಾಗಿ ಸಮಸ್ಯೆಯಾಗಲಿದೆ. ಕೇರಳದ ರೀತಿಯಲ್ಲಿ ಪ್ರಕರಣಗಳು ಹೊರಬರಲಿವೆ ಎಂಬುದಕ್ಕೆ ವಿರೋಧಿಸುತ್ತಿಲ್ಲರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಪಕ ನಾವಿನ್ನೂ ಕಾರ್ಮಿಕ ಕಾಯ್ದೆಯಡಿಯೇ ಇದ್ದೇವೆ. ನಮ್ಮದು ಚಿತ್ರರಂಗವಾಗಿದೆ ಹೊರತು ಉದ್ಯಮವಾಗಿಲ್ಲ. ಉದ್ಯಮ ಎಂದು ಘೋಷಣೆಯಾದರೆ ಎಲ್ಲ ಸೌಲಭ್ಯಗಳು ದೊರಕುತ್ತವೆ
ತಾರಾ ನಟಿ
ನಮಗೆ ಸಭೆಯಲ್ಲಿ ಮಾತನಾಡಲು ಅವಕಾಶ ನೀಡಿಲ್ಲ. ಇಂತಹ ಸಮಸ್ಯೆ ನಾಲ್ಕೈದು ವರ್ಷದ ಹಿಂದೆ ಬಂದಾಗ ಕೈಕುಲುಕಿ ಬಗೆಹರಿಸಿಕೊಳ್ಳಿ ಎಂದಿದ್ದರು. ಇಂತಹ ನಡೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆಗೆ ನಮ್ಮ ಒತ್ತಡ ಮುಂದುವರಿಯಲಿದೆ
ಕವಿತಾ ಲಂಕೇಶ್‌ ನಿರ್ದೇಶಕಿ
ಕನ್ನಡ ಚಿತ್ರರಂಗದಷ್ಟು ಒಳ್ಳೆಯ ಚಿತ್ರರಂಗ ಬೇರೆಲ್ಲೂ ಇಲ್ಲ. ಚಂದನವನದಲ್ಲಿ ಮಹಿಳಾ ಕಲಾವಿದರ ಸಂಸ್ಥೆ ಆಗಬೇಕು. ಚಿತ್ರರಂಗಕ್ಕೆ ಬರುವ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಇದರ ಮೂಲಕ ಜಾಗೃತಿ ಮೂಡಿಸಬೇಕು
ಸಂಜನಾ ಗಲ್ರಾನಿ ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT