‘ಚಿತ್ರೋತ್ಸವಕ್ಕೆ ಪ್ರತಿ ವರ್ಷ ಸರ್ಕಾರ ₹5 ಕೋಟಿ ನೀಡುತ್ತಿದೆ. ಚಿತ್ರ ನಿರ್ಮಾಪಕನಾಗಿ ಹಾಗೂ ಸಾಮಾನ್ಯ ಪ್ರತಿನಿಧಿಯಾಗಿ ನಾನು ಈ ಚಿತ್ರೋತ್ಸವಕ್ಕೆ ಭೇಟಿ ನೀಡುತ್ತಿರುತ್ತೇನೆ. ದುಂದುವೆಚ್ಚ ಮಾಡಿ ನಡೆಸುವ ಈ ಉದ್ಘಾಟನಾ ಹಾಗೂ ಸಮಾರೋಪ ಕಾರ್ಯಕ್ರಮವು ಸಿನಿಮಾ ಸಂಸ್ಕೃತಿಯನ್ನು ಉತ್ತೇಜಿಸಲು ಯಾವುದೇ ಸಹಾಯ ಮಾಡುತ್ತಿಲ್ಲ. ಹೀಗಾಗಿ ಈ ಖರ್ಚಿಗೆ ಕಡಿವಾಣ ಹಾಕಿ, ಈ ಹಣವನ್ನು ಚಲನಚಿತ್ರ ಅಕಾಡೆಮಿಗೆ ನೀಡಿ. ಈ ಹಣವನ್ನು ಬಳಸಿಕೊಂಡು, ಅಕಾಡೆಮಿಯು ಮುಂದಿನ ದಿನಗಳಲ್ಲಿ ಸಣ್ಣ ನಗರ ಹಾಗೂ ರಾಜ್ಯದಾದ್ಯಂತ ಚಿತ್ರೋತ್ಸವಗಳನ್ನು ಆಚರಿಸಲು ಬಳಕೆಯಾಗಲಿ’ ಎಂದು ಅವರು ಉಲ್ಲೇಖಿಸಿದ್ದಾರೆ.