ಚೆನ್ನೈ: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಸ್ಮಾರಕಕ್ಕೆ ಬಾಲಿವುಡ್ನ ಖ್ಯಾತ ನಟಿ ಕಂಗನಾ ರನೌತ್ ನಮನ ಸಲ್ಲಿಸಿದರು. ಸದ್ಯ ಅವರು ಜಯಲಲಿತಾ ಅವರ ಜೀವನಾಧರಿತ ಸಿನಿಮಾದಲ್ಲಿ ನಟಿ-ರಾಜಕಾರಣಿಯ ಪಾತ್ರವನ್ನು ನಿಭಾಯಿಸಿದ್ದಾರೆ.
ಕಂಗನಾ ರನೌತ್ ಜೊತೆಗೆ ಅರವಿಂದ್ ಸ್ವಾಮಿ, ನಾಸರ್, ಭಾಗ್ಯಶ್ರೀ, ಸಮುತ್ರಕನಿ, ಮಧುಬಾಲಾ ತಾರಾಗಣದಲ್ಲಿದ್ದಾರೆ. ಎ.ಎಲ್.ವಿಜಯ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಷ್ಣುವರ್ಧನ್ ಇಂದೂರಿ ಮತ್ತು ಶೈಲೇಶ್ ಆರ್. ಸಿಂಗ್ ಚಿತ್ರದ ನಿರ್ಮಾಪಕರು. ಜಿ.ವಿ. ಪ್ರಕಾಶ್ ಅವರ ಸಂಗೀತವಿದೆ.
ನಿರ್ದೇಶಕ ವಿಜಯ್ ಜೊತೆಯಲ್ಲಿ ಇಲ್ಲಿನ ಮರೀನಾ ಬೀಚ್ಗೆ ತೆರಳಿ ದಿವಂಗತ ನಾಯಕಿಯ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಜಯಲಲಿತಾ ಅವರ ಜೀವನಕಥೆ ಆಧರಿಸಿದ ಚಿತ್ರ ‘ತಲೈವಿ’ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ಸೆಪ್ಟೆಂಬರ್ 10 ರಂದು ಚಿತ್ರ ಬಿಡುಗಡೆಯಾಗಲಿದೆ. ಜಯಲಲಿತಾ ಅವರು 2016ರ ಡಿಸೆಂಬರ್ನಲ್ಲಿ ನಿಧನರಾಗಿದ್ದರು.