ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲಿಗೆಗೆ ಸಭ್ಯತೆ ಅಗತ್ಯ: ವಿಷ್ಣು ಕುರಿತ ವಿಜಯ್‌ ರಂಗರಾಜ್‌ ಮಾತಿಗೆ ಚೇತನ್‌ ಟೀಕೆ

Last Updated 12 ಡಿಸೆಂಬರ್ 2020, 14:58 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡದ ಮೇರು ನಟ ಡಾ. ವಿಷ್ಣುವರ್ಧನ್‌ ಕುರಿತು ತೆಲುಗಿನ ನಟ ವಿಜಯ್‌ ರಂಗರಾಜ್‌ ಆಡಿರುವ ಆಕ್ಷೇಪಾರ್ಹ ಮಾತುಗಳಿಗೆ ನಟ 'ಆ ದಿನಗಳು' ಚೇತನ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶನಿವಾರ ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿರುವ ಚೇತನ್‌, 'ವಿಷ್ಣುವರ್ಧನ್ ಅವರ ವಿರುದ್ಧ ವಿಜಯ್ ರಂಗರಾಜ್ ನೀಡಿದ ಹೇಳಿಕೆಯನ್ನು ನಾನು ನೋಡಿದೆ. ರಂಗರಾಜ್ ಅವರ ಮಾತುಗಳು ಅಸಹ್ಯ ಮತ್ತು ಸೂಕ್ತವಲ್ಲದ್ದು. ಹೌದು, ಜನರ ಒಟ್ಟಿಗೆ ಕೆಲಸ ಮಾಡುವಾಗ ಪರಸ್ಪರ ಘರ್ಷಣೆಗಳು ಸಂಭವಿಸಬಹುದು. ಮತ್ತು ವೈಯಕ್ತಿಕ ಸ್ಮರಣೆಗೆ ಅನುಗುಣವಾಗಿ ಸತ್ಯವು ಭಿನ್ನವಾಗಿರುತ್ತದೆ. ಆದರೆ, ನಾಲಿಗೆಯ ಸಭ್ಯತೆ ಅತ್ಯಗತ್ಯ,' ಎಂದು ಅವರು ಪೋಸ್ಟ್‌ ಪ್ರಕಟಿಸಿದ್ದಾರೆ.

ತೆಲುಗಿನ ನಟ ವಿಜಯ್‌ ರಂಗರಾಜು ಅವರು ಸಂದರ್ಶನವೊಂದರಲ್ಲಿ ವಿಷ್ಣು ಕುರಿತು ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದು, ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಅಲ್ಲದೆ, ವಿಜಯ್‌ ರಂಗರಾಜ್‌ ವಿರುದ್ಧ ಕರ್ನಾಟಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT