ಯುಗಾದಿಗೆ ಚಿತ್ರತಂಡ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ‘ಭೈರತಿ ರಣಗಲ್’ ಗ್ಯಾಂಗ್ಸ್ಟರ್ ಆಗಿದ್ದು ಹೇಗೆ? ಆ ಕಪ್ಪುಬಣ್ಣದ ಬಟ್ಟೆಯನ್ನು ಯಾಕೆ ಹಾಕುತ್ತಾರೆ ಎನ್ನುವುದೇ ಚಿತ್ರದ ಕಥೆ’ ಎಂದು ಈ ಹಿಂದೆ ನರ್ತನ್ ಸುಳಿವು ನೀಡಿದ್ದರು. ಇದಕ್ಕೆ ಪೂರಕವಾಗಿ ಇದೀಗ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಶಿವರಾಜ್ಕುಮಾರ್, ‘ಈ ಸ್ವಾತಂತ್ರ್ಯ ದಿನ, ನ್ಯಾಯದ ಬಣ್ಣ ಕಪ್ಪು ಆಗಿರಲಿದೆ’ ಎಂದಿದ್ದಾರೆ. ‘ಭೈರತಿ ರಣಗಲ್’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ. ‘ಭೈರತಿ ರಣಗಲ್’ ಎಂಬ ಪಾತ್ರದ ಹಿನ್ನೋಟ ಈ ಪ್ರೀಕ್ವೆಲ್ನಲ್ಲಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್ , ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಮುಂತಾದ ಕಲಾವಿದರಿದ್ದಾರೆ.