<p>ಪ್ರೀತಿ, ಪ್ರೇಮದ ಕಥೆ ಹೇಳುತ್ತಿದ್ದ ನಿರ್ದೇಶಕ ನಾಗಶೇಖರ್ ಗಂಭೀರವಾದ ಕಥಾವಸ್ತುವುಳ್ಳ ವಿಷಯವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅದಕ್ಕೊಂದು ಬಲವಾದ ಕಾರಣವೂ ಇದೆ. ಅದನ್ನು ವಿವರಿಸುವ ವೇದಿಕೆಯಾಗಿತ್ತು ‘ಭೀಮಾ ಕೋರೆಗಾಂವ್’ ಶೀರ್ಷಿಕೆ ಅನಾವರಣ ಸಮಾರಂಭ.</p>.<p>‘1818 ರ ಜ.1 ರಂದು ಸಮಾಜದಲ್ಲಿನ ಅಸಮಾನತೆಯ ವಿರುದ್ದ ನಡೆದ ‘ಭೀಮಾ ಕೋರೆಗಾಂವ್’ ಹೋರಾಟವನ್ನೇ ಕಥೆಯಾಗಿ ಹೊಂದಿರುವ ಚಿತ್ರವಿದು. ಶೋಷಿತರ ಧ್ವನಿಯಾಗಿ ಈ ಚಿತ್ರ ಮೂಡಿಬರಲಿದೆ. ನಾನು ಕೂಡ ಬದುಕಿನ ಒಂದು ಹಂತದಲ್ಲಿ ಶೋಷಿತನಾಗಿದ್ದೆ. ನನ್ನೊಳಗಿನ ನೋವಿನ ಕಥೆಯೂ ಹೌದು. ಮುಂದಿನ ವರ್ಷದ ವೇಳೆಗೆ ಚಿತ್ರೀಕರಣಕ್ಕೆ ಹೋಗುತ್ತೇವೆ. ₹120 ಕೋಟಿ ಬಜೆಟ್ನ ಚಿತ್ರವಾಗಿದ್ದು ಸ್ಟಾರ್ ನಟರೊಬ್ಬರು ನಾಯಕನಾಗಿರುತ್ತಾರೆ. ದೀಪಿಕಾ ಪಡುಕೋಣೆಯನ್ನು ನಾಯಕಿಯಾಗಿ ಕರೆತರುವ ಆಲೋಚನೆ ಇದೆ’ ಎಂದರು ಚಿತ್ರದ ನಿರ್ದೇಶಕ ನಾಗಶೇಖರ್.</p>.<p>ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಛಲವಾದಿ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಘಟನೆಯನ್ನು ನಮ್ಮ ಜನರಿಗೆ ತಿಳಿಸಬೇಕು ಎಂದು ನಿರ್ಧರಿಸಿ ನಿರ್ಮಾಣಕ್ಕೆ ಮುಂದಾಗಿದ್ದೇನೆ’ ಎಂದರು ನಿರ್ಮಾಪಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರೀತಿ, ಪ್ರೇಮದ ಕಥೆ ಹೇಳುತ್ತಿದ್ದ ನಿರ್ದೇಶಕ ನಾಗಶೇಖರ್ ಗಂಭೀರವಾದ ಕಥಾವಸ್ತುವುಳ್ಳ ವಿಷಯವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅದಕ್ಕೊಂದು ಬಲವಾದ ಕಾರಣವೂ ಇದೆ. ಅದನ್ನು ವಿವರಿಸುವ ವೇದಿಕೆಯಾಗಿತ್ತು ‘ಭೀಮಾ ಕೋರೆಗಾಂವ್’ ಶೀರ್ಷಿಕೆ ಅನಾವರಣ ಸಮಾರಂಭ.</p>.<p>‘1818 ರ ಜ.1 ರಂದು ಸಮಾಜದಲ್ಲಿನ ಅಸಮಾನತೆಯ ವಿರುದ್ದ ನಡೆದ ‘ಭೀಮಾ ಕೋರೆಗಾಂವ್’ ಹೋರಾಟವನ್ನೇ ಕಥೆಯಾಗಿ ಹೊಂದಿರುವ ಚಿತ್ರವಿದು. ಶೋಷಿತರ ಧ್ವನಿಯಾಗಿ ಈ ಚಿತ್ರ ಮೂಡಿಬರಲಿದೆ. ನಾನು ಕೂಡ ಬದುಕಿನ ಒಂದು ಹಂತದಲ್ಲಿ ಶೋಷಿತನಾಗಿದ್ದೆ. ನನ್ನೊಳಗಿನ ನೋವಿನ ಕಥೆಯೂ ಹೌದು. ಮುಂದಿನ ವರ್ಷದ ವೇಳೆಗೆ ಚಿತ್ರೀಕರಣಕ್ಕೆ ಹೋಗುತ್ತೇವೆ. ₹120 ಕೋಟಿ ಬಜೆಟ್ನ ಚಿತ್ರವಾಗಿದ್ದು ಸ್ಟಾರ್ ನಟರೊಬ್ಬರು ನಾಯಕನಾಗಿರುತ್ತಾರೆ. ದೀಪಿಕಾ ಪಡುಕೋಣೆಯನ್ನು ನಾಯಕಿಯಾಗಿ ಕರೆತರುವ ಆಲೋಚನೆ ಇದೆ’ ಎಂದರು ಚಿತ್ರದ ನಿರ್ದೇಶಕ ನಾಗಶೇಖರ್.</p>.<p>ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಛಲವಾದಿ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಘಟನೆಯನ್ನು ನಮ್ಮ ಜನರಿಗೆ ತಿಳಿಸಬೇಕು ಎಂದು ನಿರ್ಧರಿಸಿ ನಿರ್ಮಾಣಕ್ಕೆ ಮುಂದಾಗಿದ್ದೇನೆ’ ಎಂದರು ನಿರ್ಮಾಪಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>