ರಾಜ್ಯದಾದ್ಯಂತ ಕನ್ನಡದ ಡಿಂಡಿಮಾದ ಸದ್ದು ಜೋರಾಗಿದ್ದು, ಸ್ಯಾಂಡಲ್ವುಡ್ ತಾರೆಯರು ತಮ್ಮದೇ ರೀತಿಯಲ್ಲಿ ರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ್ದಾರೆ.
ನಟ ಶಿವರಾಜ್ಕುಮಾರ್ ಅವರು ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರುವ ಎಂದು ತಾವೇ ಹಾಡಿ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಇನ್ನು ನಟಿನಟಿ ಹರಿಪ್ರಿಯಾ ಟಂಗ್ ಟ್ವಿಸ್ಟರ್ ಚಾಲೆಂಜ್ ‘ಅಶ್ವತ್ಥ ಅರಳಿ ಮರ ಬುಡ ತಳಿರೊಡೆದೆರೆಡೆಳೆಯಾಯಿತು’ಕೊಡುವ ಮೂಲಕ ಶುಭಾಶಯ ಹೇಳಿದ್ದಾರೆ.
ಹೊನ್ನಂಥ ನಾಡು
— DrShivaRajkumar (@NimmaShivanna) November 1, 2019
ಶ್ರೀಗಂಧದ ಕಾಡು
ವಿಶ್ವದಾದ್ಯಂತ ಇರುವ ಎಲ್ಲಾ ಕನ್ನಡಿಗರಿಗೂ ಕರುನಾಡ ಹಬ್ಬದ ಶುಭಾಶಯಗಳು. pic.twitter.com/WzObl7D2hT
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 😍🙏🏻 ಸಿರಿಗನ್ನಡಂ ಗೆಲ್ಗೆ ❤️🙏🏻 A tongue twister challenge to you all 😁 pic.twitter.com/veU4ze93NS
— HariPrriya (@HariPrriya6) November 1, 2019
ನಟ ಪುನೀತ್ ರಾಜ್ಕುಮಾರ್ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ಹಾಡಿನ ವಿಡಿಯೊ ಮಾಡಿ ಶುಭ ಕೋರಿದ್ದಾರೆ. ದರ್ಶನ್, ರಶ್ಮಿಕಾ ಮಂದಣ್ಣ, ಗಣೇಶ್, ನಿರ್ದೇಶಕ ಸುನಿ... ಹೀಗೆ ಅನೇಕ ತಾರೆಯರು ಕನ್ನಡ ರಾಜ್ಯೋತ್ಸವದ ಖುಷಿ ಹಂಚಿಕೊಂಡಿದ್ದಾರೆ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 😍🙏🏻 ಸಿರಿಗನ್ನಡಂ ಗೆಲ್ಗೆ ❤️🙏🏻 A tongue twister challenge to you all 😁 pic.twitter.com/veU4ze93NS
— HariPrriya (@HariPrriya6) November 1, 2019
'ಕನ್ನಡ ನಾಡಲ್ಲಿ ಹುಟ್ಟಿಬರಲು ಪುಣ್ಯ ಮಾಡಿರಲೇ ಬೇಕು. ಸಮಸ್ತ ಕನ್ನಡ ಕುಲಕೋಟಿಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು 😊ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ' ಎಂದು ದರ್ಶನ್ ಟ್ವಿಟ್ಟರ್ನಲ್ಲಿ ಶುಭ ಕೋರಿದ್ದಾರೆ.
ಕನ್ನಡ ನಾಡಲ್ಲಿ ಹುಟ್ಟಿಬರಲು ಪುಣ್ಯ ಮಾಡಿರಲೇ ಬೇಕು. ಸಮಸ್ತ ಕನ್ನಡ ಕುಲಕೋಟಿಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು 😊
— Darshan Thoogudeepa (@dasadarshan) November 1, 2019
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ pic.twitter.com/ERdn8gNhXT
💛ಕನ್ನಡ ರಾಜ್ಯೋತ್ಸವದ ಶುಭಾಶಯಗಳು❤️ 🙏 pic.twitter.com/S1KRZOs69b
— Rashmika Mandanna (@iamRashmika) November 1, 2019
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ ...ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು....ಜೈ ಕರ್ನಾಟಕ pic.twitter.com/L4EfgL2wns
— Puneeth Rajkumar (@PuneethRajkumar) November 1, 2019
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.