ತಾಯಿ, ತಂಗಿ, ಸೋದರ ಸಂಬಂಧಿಯೊಂದಿಗೆ ಅವರು ಮನೆಯಲ್ಲೇ ದಿನಸಿ ಕಿಟ್ ಸಿದ್ಧಪಡಿಸಿ ಅವಶ್ಯಕತೆ ಇರುವವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಹಿರಿಯ ಕಲಾವಿದೆ ಆರ್.ಟಿ. ರಮಾ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಸರಸ್ವತಿ ಎಂಬುವವರು ಕಾರುಣ್ಯ ಅವರ ಮೊಬೈಲ್ಗೆ ಸಂದೇಶ ಕಳುಹಿಸಿದ್ದರಂತೆ. ತಕ್ಷಣವೇ ಅವರ ನೆರವಿಗೆ ಧಾವಿಸಿದ ಕಾರುಣ್ಯ, ರಮಾ ಅವರಿಗೆ ದಿನಸಿ ಕೊಟ್ಟುಬಂದಿದ್ದಾರೆ.