‘...ಖಾತೆಯಲ್ಲಿ ಹಣವಿಲ್ಲ’ದ ಲಿರಿಕಲ್ ಹಾಡು

ದಿಗಂತ್ - ಐಂದ್ರಿತಾ ರೇ ಜೋಡಿ ನಾಯಕ - ನಾಯಕಿಯಾಗಿ ನಟಿಸಿರುವ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಲಿರಿಕಲ್ ಸಾಂಗ್ ಬಿಡುಗಡೆಗೊಳಿಸಿದರು.
‘ನಾನು ಮೂಲತಃ ಮಲೆನಾಡಿನವನು. ಅಡಿಕೆ ಬೆಳೆದು ನನಗೆ ಅಭ್ಯಾಸವಿದೆ.. ಈ ಸಿನಿಮಾ ಮಲೆನಾಡಿನ ಹುಡುಗನ ಕಥೆಯನ್ನೇ ಆಧರಿಸಿರುವುದರಿಂದ ನನಗೆ ನಟಿಸಲು ಸುಲಭವಾಯಿತು’ ಎಂದರು ದಿಗಂತ್.
‘ಜನ ಈಗ ಉತ್ತಮ ಕಥಾವಸ್ತುವುಳ್ಳ ಚಿತ್ರಗಳನ್ನು ಇಷ್ಟಪಡುತ್ತಿದ್ದಾರೆ. ನಮ್ಮ ಚಿತ್ರವನ್ನು ಕನ್ನಡ ಕಲಾರಸಿಕರು ಇಷ್ಟಪಟ್ಟು ಯಶಸ್ಸು ಗಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದರು ಚಿತ್ರದ ಮತ್ತೊಬ್ಬ ನಾಯಕಿ ರಂಜನಿ ರಾಘವನ್.
ಕೊರೊನಾ ಹಾವಳಿ ಕಡಿಮೆಯಾದರೆ ಸೆಪ್ಟೆಂಬರ್ ವೇಳೆಗೆ ಚಿತ್ರವನ್ನು ತೆರೆಗೆ ತರುತ್ತೇವೆ ಎಂದು ನಿರ್ದೇಶಕ ವಿನಾಯಕ ಕೋಡ್ಸರ ಹೇಳಿದರು. ಪ್ರಜ್ವಲ್ ಪೈ ಅವರ ಸಂಗೀತ ನಿರ್ದೇಶನ ಇದೆ. ವಿಶ್ವಜಿತ್ ರಾವ್ ಹಾಡು ಬರೆದಿದ್ದಾರೆ. ಸಿಲ್ಕ್ ಮಂಜು ಚಿತ್ರದ ನಿರ್ಮಾಪಕರು. ಲಹರಿ ಸಂಸ್ಥೆ ಆಡಿಯೊ ಹಕ್ಕು ಪಡೆದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.