<p><strong>ಬೆಂಗಳೂರು:</strong>ಎಂ.ಎಸ್. ರಾಜಶೇಖರ್ (75)ಅವರು ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಎಂದು ಕರೆಸಿಕೊಳ್ಳುವುದಕ್ಕೂ ಮೊದಲು ಖ್ಯಾತ ಪ್ರಸಾಧನಕಲಾವಿದರಾಗಿದ್ದರು.</p>.<p>ಡಾ. ರಾಜ್ಕುಮಾರ್ ಅಭಿನಯದ ‘ಧ್ರುವತಾರೆ’ ಸಿನಿಮಾ ನಿರ್ದೇಶಿಸುವ ಮೂಲಕ ಯಶಸ್ವಿ ನಿರ್ದೇಶಕರ ಪಟ್ಟಿಗೆ ಮೊದಲ ಪ್ರಯತ್ನದಲ್ಲೇ ಸೇರಿದರು.</p>.<p>ರಾಜಶೇಖರ್ ಅವರ ತಂದೆಯ ಹೆಸರು ಎಂ.ಎಸ್. ಸುಬ್ಬಣ್ಣ.</p>.<p>ಹದಿನೇಳು ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿದ ನಂತರ ರಾಜಶೇಖರ್ ‘ಧ್ರುವತಾರೆ’ ನಿರ್ದೇಶಿಸಿದರು. ಇದನ್ನು ನಿರ್ದೇಶಿಸಲು ರಾಜ್ ಅವರ ಪ್ರೋತ್ಸಾಹವೇ ಕಾರಣ ಎಂದು ಅವರ ಆಪ್ತರು ಹೆಳುತ್ತಾರೆ.</p>.<p>ಇದಾದ ನಂತರ ‘ಅನುರಾಗ ಅರಳಿತು’ದಂತಹ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿದರು. ಇವರು ನಿರ್ದೇಶಿಸಿದ. ರಾಘವೇಂದ್ರ ರಾಜ್ಕುಮಾರ್ ಅಭಿನಯದ ‘ನಂಜುಂಡಿ ಕಲ್ಯಾಣ’ ದೊಡ್ಡ ಮಟ್ಟದ ಯಶಸ್ಸು ಕಂಡಿತು. ‘ಹೃದಯ ಹಾಡಿತು’ ಮತ್ತೊಂದು ಯಶಸ್ವಿ ಚಿತ್ರ.</p>.<p>ರಾಜಶೇಖರ್ ಅವರಿಗೆ ಕಾದಂಬರಿ ಆಧರಿಸಿದ ಸಿನಿಮಾ ನಿರ್ದೇಶನ ಮಾಡುವಲ್ಲಿ ಹೆಚ್ಚಿನ ಒಲವು ಇತ್ತು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತು. ‘ಕಲ್ಯಾಣ ರೇಖೆ’, ‘ಮಣ್ಣಿನ ದೋಣಿ’, ‘ಗಂಡು ಸಿಡಿಗುಂಡು’ ಇವರ ನಿರ್ದೇಶನದ ಇತರ ಕೆಲವು ಚಿತ್ರಗಳು.</p>.<p>ಶಿವರಾಜ್ ಕುಮಾರ್ ಅವರಿಗೆ ‘ಹ್ಯಾಟ್ರಿಕ್ ಹೀರೊ’ ಎಂಬ ಖ್ಯಾತಿ ದಕ್ಕಿದ್ದು ಅವರು ಅಭಿನಯಿಸಿದ ‘ಆನಂದ್’, ‘ರಥಸಪ್ತಮಿ’ ಮತ್ತು ‘ಮನಮೆಚ್ಚಿದ ಹುಡುಗಿ’ ಚಿತ್ರಗಳು ಸಾಲಾಗಿ ಸೂಪರ್ ಹಿಟ್ ಆದ ಕಾರಣದಿಂದ. ಈ ಮೂರು ಸಿನಿಮಾಗಳ ಪೈಕಿ ‘ರಥಸಪ್ತಮಿ’ ಮತ್ತು ‘ಮನಮೆಚ್ಚಿದ ಹುಡುಗಿ’ ಚಿತ್ರಗಳನ್ನು ನಿರ್ದೇಶಿಸಿದ್ದುರಾಜಶೇಖರ್.</p>.<p><strong>ಉಸಿರಾಟ ತೊಂದರೆ</strong></p>.<p>ಚಿತ್ರ ನಿರ್ದೆಶಕ ಎಂ.ಎಸ್.ರಾಜಶೇಖರ್ ಸೋಮವಾರ ನಿಧನರಾದರು. ಅವರಿಗೆ ಪತ್ನಿ, ಮಗಳು, ಮಗ ಇದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ನಾಗರಬಾವಿ ಸಮೀಪದ ಸೋಮನಹಳ್ಳಿಯಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಎಂ.ಎಸ್. ರಾಜಶೇಖರ್ (75)ಅವರು ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಎಂದು ಕರೆಸಿಕೊಳ್ಳುವುದಕ್ಕೂ ಮೊದಲು ಖ್ಯಾತ ಪ್ರಸಾಧನಕಲಾವಿದರಾಗಿದ್ದರು.</p>.<p>ಡಾ. ರಾಜ್ಕುಮಾರ್ ಅಭಿನಯದ ‘ಧ್ರುವತಾರೆ’ ಸಿನಿಮಾ ನಿರ್ದೇಶಿಸುವ ಮೂಲಕ ಯಶಸ್ವಿ ನಿರ್ದೇಶಕರ ಪಟ್ಟಿಗೆ ಮೊದಲ ಪ್ರಯತ್ನದಲ್ಲೇ ಸೇರಿದರು.</p>.<p>ರಾಜಶೇಖರ್ ಅವರ ತಂದೆಯ ಹೆಸರು ಎಂ.ಎಸ್. ಸುಬ್ಬಣ್ಣ.</p>.<p>ಹದಿನೇಳು ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿದ ನಂತರ ರಾಜಶೇಖರ್ ‘ಧ್ರುವತಾರೆ’ ನಿರ್ದೇಶಿಸಿದರು. ಇದನ್ನು ನಿರ್ದೇಶಿಸಲು ರಾಜ್ ಅವರ ಪ್ರೋತ್ಸಾಹವೇ ಕಾರಣ ಎಂದು ಅವರ ಆಪ್ತರು ಹೆಳುತ್ತಾರೆ.</p>.<p>ಇದಾದ ನಂತರ ‘ಅನುರಾಗ ಅರಳಿತು’ದಂತಹ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿದರು. ಇವರು ನಿರ್ದೇಶಿಸಿದ. ರಾಘವೇಂದ್ರ ರಾಜ್ಕುಮಾರ್ ಅಭಿನಯದ ‘ನಂಜುಂಡಿ ಕಲ್ಯಾಣ’ ದೊಡ್ಡ ಮಟ್ಟದ ಯಶಸ್ಸು ಕಂಡಿತು. ‘ಹೃದಯ ಹಾಡಿತು’ ಮತ್ತೊಂದು ಯಶಸ್ವಿ ಚಿತ್ರ.</p>.<p>ರಾಜಶೇಖರ್ ಅವರಿಗೆ ಕಾದಂಬರಿ ಆಧರಿಸಿದ ಸಿನಿಮಾ ನಿರ್ದೇಶನ ಮಾಡುವಲ್ಲಿ ಹೆಚ್ಚಿನ ಒಲವು ಇತ್ತು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತು. ‘ಕಲ್ಯಾಣ ರೇಖೆ’, ‘ಮಣ್ಣಿನ ದೋಣಿ’, ‘ಗಂಡು ಸಿಡಿಗುಂಡು’ ಇವರ ನಿರ್ದೇಶನದ ಇತರ ಕೆಲವು ಚಿತ್ರಗಳು.</p>.<p>ಶಿವರಾಜ್ ಕುಮಾರ್ ಅವರಿಗೆ ‘ಹ್ಯಾಟ್ರಿಕ್ ಹೀರೊ’ ಎಂಬ ಖ್ಯಾತಿ ದಕ್ಕಿದ್ದು ಅವರು ಅಭಿನಯಿಸಿದ ‘ಆನಂದ್’, ‘ರಥಸಪ್ತಮಿ’ ಮತ್ತು ‘ಮನಮೆಚ್ಚಿದ ಹುಡುಗಿ’ ಚಿತ್ರಗಳು ಸಾಲಾಗಿ ಸೂಪರ್ ಹಿಟ್ ಆದ ಕಾರಣದಿಂದ. ಈ ಮೂರು ಸಿನಿಮಾಗಳ ಪೈಕಿ ‘ರಥಸಪ್ತಮಿ’ ಮತ್ತು ‘ಮನಮೆಚ್ಚಿದ ಹುಡುಗಿ’ ಚಿತ್ರಗಳನ್ನು ನಿರ್ದೇಶಿಸಿದ್ದುರಾಜಶೇಖರ್.</p>.<p><strong>ಉಸಿರಾಟ ತೊಂದರೆ</strong></p>.<p>ಚಿತ್ರ ನಿರ್ದೆಶಕ ಎಂ.ಎಸ್.ರಾಜಶೇಖರ್ ಸೋಮವಾರ ನಿಧನರಾದರು. ಅವರಿಗೆ ಪತ್ನಿ, ಮಗಳು, ಮಗ ಇದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ನಾಗರಬಾವಿ ಸಮೀಪದ ಸೋಮನಹಳ್ಳಿಯಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>