ಇದೇ ವೇಳೆ ‘ಸೂರರೈ ಪೋಟ್ರು’ ಸಿನಿಮಾವನ್ನು ಕನ್ನಡ ಅವತರಣಿಕೆಯಲ್ಲಿ ತಂದಿದ್ದಕ್ಕೆ ಕನ್ನಡ ಸಿನಿಪ್ರಿಯರು ಖುಷಿ ವ್ಯಕ್ತಪಡಿಸಿದ್ದಾರೆ.ಕನ್ನಡಿಗನೊಬ್ಬನ ಕಥೆಯನ್ನು (ಕ್ಯಾಪ್ಟನ್ ಜೆ.ಆರ್. ಗೋಪಿನಾಥ್) ತಮಿಳಿನಡಬ್ ಅವತರಣಿಕೆಯಲ್ಲಿ ನೋಡಬೇಕಾಯಿತು.ಈವಿಪರ್ಯಾಸ ತಂದು ಕೊಟ್ಟ ಕನ್ನಡ ಚಿತ್ರರಂಗಕ್ಕೆ ಕೋಟಿ ನಮನ. ಕನ್ನಡ ಸಿನಿಮಾ ಮಂದಿ ರೌಡಿಗಳು, ಅಪಹರಣಕಾರರ, ಗೂಂಡಾಗಳಜೀವನ ಚರಿತ್ರೆ ಬರೆಯುವುದರಲ್ಲಿ ಬ್ಯುಸಿ ಆಗಿದ್ದಾರೆ ಎಂದು ಹಲವರು ಟ್ವಿಟರ್ನಲ್ಲಿ ವ್ಯಂಗ್ಯವಾಡಿದ್ದಾರೆ.