‘ವ್ಯವಧಾನವಿಲ್ಲದೆ ಒಬ್ಬರನ್ನು ಮಲೆಯಾಳಿ ಕುಟ್ಟಿ, ವೇಶ್ಯೆ, ಮಿಟಕಲಾಡಿ, ಅವಕಾಶವಾದಿ, ಎಂದೆಲ್ಲಾ ಜರಿಯುವ ಮುನ್ನ ನಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ಎಂಬುದನ್ನು ಮರೆಯಬಾರದಲ್ವಾ..? ಯಾವುದೇ ಹೆಣ್ಣುಮಕ್ಕಳೂ ದೌರ್ಜನ್ಯಕ್ಕೆ ಒಳಗಾಗಬಾರದು. ಯಾವ ಸತ್ಪುರುಷನಿಗೂ ಮಾಡದ ತಪ್ಪಿಗೆ ಶಿಕ್ಷೆಯಾಗಬಾರದು. ಸೂಕ್ತ ಸಮಯ ಬಂದಾಗ ಯಾರು ನಿಜವಾದ ಶೋಷಿತರು ಎಂಬುದು ಬಯಲಾಗುತ್ತದೆ. ಅಲ್ಲಿಯವರೆಗೂ ಯಾರನ್ನೂ ಜರಿಯದೇ. ಸಂಯಮ ಕಾಯ್ದುಕೊಳ್ಳುವುದು ಮನುಷ್ಯತ್ವ ಅಲ್ಲವೇ..?’ ಎಂದು ಜಯತೀರ್ಥ ಬರೆದುಕೊಂಡಿದ್ದಾರೆ.