ನಿರ್ದೇಶಕ ನಾಗಣ್ಣ ಮಾತನಾಡಿ, 'ಇಂತಹ ಸಿನಿಮಾ ಮಾಡಲು ನಿರ್ಮಾಪಕರಿಗೆ ಎದೆಗಾರಿಕೆ ಬೇಕು. ಮಹಾಭಾರತದ ಕಥೆ 3D ರೂಪದಲ್ಲಿ ಬರುತ್ತಿರುವುದು ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು. ಇದು ಕನ್ನಡಿಗರು ಹೆಮ್ಮೆ ಪಡುವ ಸಂಗತಿ' ಎಂದು ಹೇಳಿದರು.
ಪೋಷಕ ನಟ ಶ್ರೀನಿವಾಸಮೂರ್ತಿ ಮಾತನಾಡಿ, 'ಮಹಾಭಾರತದ ಕೃಷ್ಣ, ದುರ್ಯೋಧನ, ಅರ್ಜುನನ ಪಾತ್ರ ಎಂದಾಕ್ಷಣ ಇಂದಿಗೂ ತೆಲುಗಿನ ನಟ ಎನ್ಟಿಆರ್ ಅವರ ಚಿತ್ರವೇ ಕಣ್ಣ ಮುಂದೆ ಬರುತ್ತದೆ. ದರ್ಶನ್ ಅವರು ಎನ್ಟಿಆರ್ ಅವರ ಪಾತ್ರವನ್ನು ಮೀರಿಸುವಂತೆ ದುರ್ಯೋಧನನ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.