‘ಅನು ಪ್ರಭಾಕರ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ರಮೇಶ್ ಭಟ್, ಸುಧಾ ಬೆಳವಾಡಿ, ರೆಹಮಾನ್ ಹಾಸನ್, ಸುಹಾನಾ ಸೈಯದ್ ಅವರು ತಾರಾಬಳಗದಲ್ಲಿ ಇದ್ದಾರೆ. ಒಂದಿಷ್ಟು ಮಂದಿ ಹೊಸಬರೂ ಇದ್ದಾರೆ. ಮಂಗಳೂರು ಕಡೆ ಚಿತ್ರೀಕರಣ ಆಗಿದೆ’ ಎಂದು ‘ಪ್ರಜಾ ಪ್ಲಸ್’ ಜೊತೆ ಮಾತಿಗೆ ಸಿಕ್ಕಿದ್ದ ಆರ್ನಾ ಮಾಹಿತಿ ಹಂಚಿಕೊಂಡರು.