ಉತ್ಸವ್ ಮಾತನಾಡಿ, ‘ಲಾಕ್ಡೌನ್ಗೂ ಮುನ್ನ ಕೊಡಗಿಗೆ ಹೋಗಿದ್ದೆ. ಆ ಸಮಯದಲ್ಲೊಂದು ಲೇಖನ ಓದಿದ್ದೆ. ಗಂಗಮ್ಮ ಎಂಬ ಗರ್ಭಿಣಿ ಬೆಂಗಳೂರಿನಿಂದ ಊರಿಗೆ ಹೋಗಬೇಕಾದರೆ ಮಧ್ಯದಲ್ಲಿ ಬಹುಅಂಗಾಂಗ ವೈಫಲ್ಯದಿಂದ ನಿಧನ ಹೊಂದುತ್ತಾರೆ. ಇದು ನನ್ನನ್ನು ಬಹಳವಾಗಿ ಕಾಡಿತು. ಈ ವಿಷಯ ದಾಖಲೆಯಾಗಬೇಕು ಎಂದು ಅನಿಸಿತು. ಆಗ ಬರೆಯಲು ಶುರು ಮಾಡಿದೆ. ಆ ನಂತರ ಅದನ್ನು ಸಿನಿಮಾ ಮಾಡಿದೆ’ ಎಂದು ಸಿನಿಮಾ ಕಥಾಹಂದರವನ್ನು ತೆರೆದಿಟ್ಟರು.