ಮುಂಬೈ: ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ಸೂರಜ್ ವೆಂಜರಮೂಡು ತಮ್ಮ ಮುಂದಿನ ಚಿತ್ರ 'ಜನ ಗಣ ಮನ' ಏ.28ಕ್ಕೆ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ ಎಂದು ಘೋಷಿಸಿದ್ದಾರೆ.
ಭಾನುವಾರ ಬೆಳಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಇಬ್ಬರು, ಸಿನಿಮಾ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ.
'ಆತ್ಮಸಾಕ್ಷಿಯ ವಿಷಯಗಳಲ್ಲಿ ಬಹುಸಂಖ್ಯಾತರ ಕಾನೂನಿಗೆ ಸ್ಥಾನವಿಲ್ಲ'- ಮಹಾತ್ಮ ಗಾಂಧಿ. #JanaGanaMana ಸಿನಿಮಾ ಏಪ್ರಿಲ್ 28 ರಂದು ವಿಶ್ವಾದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ!' ಎಂದು ಬರೆದುಕೊಂಡಿದ್ದಾರೆ.