ಗಣೇಶ ಚತುರ್ಥಿಗೆ ಹಾಡನ್ನು ಬಿಡುಗಡೆಗೊಳಿಸಲು ಚಿತ್ರತಂಡ ಯೋಜನೆ ಮಾಡಿಕೊಂಡಿದೆ. ಹಾರುವ ತಟ್ಟೆಯನ್ನೇ ಮೂಲಕಥಾ ವಸ್ತುವಾಗಿಸಿಕೊಂಡಿರುವ ಚಿತ್ರದಲ್ಲಿ ಹಿರಿಯ ನಟ ಅನಂತ್ನಾಗ್,ಪ್ರಕಾಶ್ ಬೆಳವಾಡಿ,ಸುಧಾ ಬೆಳವಾಡಿ, ಶರ್ಮಿಳಾ ಮಾಂಡ್ರೆ,ಸಂಯುಕ್ತ ಹೊರನಾಡು,ಕಿರಣ್ ಶ್ರೀನಿವಾಸು ಬಣ್ಣ ಹಚ್ಚಿದ್ದಾರೆ. ಪ್ರಕಾಶ್ ಬೆಳವಾಡಿ ಚಿತ್ರಕಥೆ ಬರೆದಿದ್ದು,ಅಮೆರಿಕ ಮೂಲದ ಜೆಸ್ಸಿ ಕ್ಲಿಂಟನ್ ಸಂಗೀತ,ಮನೋಹರ್ ಜೋಷಿ ಛಾಯಾಗ್ರಹಣ ಇದೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರಲಿದೆ.