ವರ್ಷದ ಹಿಂದೆ ನಿರ್ಮಾಪಕ ನಿಖಿಲ್ ಮಂಜು ಕಂಬಳದ ಓಟಗಾರ ಶ್ರೀನಿವಾಸ ಗೌಡ ಅವರ ಮೇಲೆ ಸಿನಿಮಾ ಮಾಡುವುದಾಗಿ ತಿಳಿಸಿದ್ದರು. ಶ್ರೀನಿವಾಸ ಗೌಡ ಕೆಸರುಗದ್ದೆಯಲ್ಲಿ ಉಸೈನ್ ಬೋಲ್ಟ್ಗಿಂತಲೂ ವೇಗವಾಗಿ ಓಡಿ ದಾಖಲೆ ನಿರ್ಮಿಸಿದ್ದರು. ಈಗ ರಾಜೇಂದ್ರ ಸಿಂಗ್ ಬಾಬು ಕಂಬಳದ ವಿಷಯವನ್ನು ತೆರೆ ಮೇಲೆ ತರಲು ಸಜ್ಜಾಗಿದ್ದಾರೆ ಎನ್ನುತ್ತಿವೆ ಮೂಲಗಳು.