1968–69ರಲ್ಲಿ ಸ್ನೇಹಿತರ ಜತೆ ಸೇರಿ ‘ಊರ್ವಶಿ’ ಸಿನಿಮಾ ನಿರ್ಮಿಸಿದರು. ಪುಟ್ಟಣ್ಣ ಕಣಗಾಲ್ ಅವರ ‘ಮಾನಸ ಸರೋವರ’, ‘ಧರಣಿ ಮಂಡಲ ಮಧ್ಯದೊಳಗೆ’, ‘ಅಮೃತಗಳಿಗೆ’ ಸಿನಿಮಾಗಳಿಗೆಛಾಯಾಗ್ರಾಹಕರಾಗಿ ಕೆಲಸ ಮಾಡಿದರು. ‘ಬೂತಯ್ಯನ ಮಗ ಅಯ್ಯು’ ಅವರಿಗೆ ಹೆಚ್ಚಿನ ಮನ್ನಣೆ ತಂದುಕೊಟ್ಟಿತು. ‘ಉಪಾಸನೆ’, ‘ಪುಟ್ಟ ಹೆಂಡ್ತಿ’, ‘ಕಾವ್ಯ’, ‘ರಾವಣ ರಾಜ್ಯ’, ‘ನೆನಪಿನ ದೋಣಿ’ ‘ನನ್ನ ಗೋಪಾಲ’ ಇವು ಅವರುಛಾಯಾಗ್ರಾಹಕರಾಗಿ ಕೆಲಸ ಮಾಡಿದ ಪ್ರಮುಖ ಚಿತ್ರಗಳು. ವಿ.ಕೆ.ರಾಮಮೂರ್ತಿ, ಕೂಡ್ಲು ರಾಮಕೃಷ್ಣ, ಎ.ಟಿ.ರಘು ಹೀಗೆ ಹಲವು ನಿರ್ದೇಶಕರ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.