ವಿಜಯ ಯಾತ್ರೆ ಮಾರ್ಚ್ 29ರಂದು ತುಮಕೂರಿನಿಂದ ಆರಂಭವಾಗಬೇಕಿತ್ತು. ಇದಕ್ಕಾಗಿ ವೇಳಾಪಟ್ಟಿಯನ್ನೂ ಪ್ರಕಟಿಸಿದ್ದ ಚಿತ್ರತಂಡ ನಾಲ್ಕು ದಿನಗಳ ಕಾಲ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಶಿವಮೊಗ್ಗ, ಹಾಸನ, ತಿಪಟೂರು, ಗುಂಡ್ಲುಪೇಟೆ, ಮೈಸೂರು, ಮಂಡ್ಯ ಮತ್ತು ಮದ್ದೂರಿನಲ್ಲಿ ಅಭಿಮಾನಿಗಳನ್ನು ಭೇಟಿಯಾಗಲು ಈ ಹಿಂದೆ ನಿರ್ಧರಿಸಿತ್ತು.