ಆ್ಯನಿಮೇಟೆಡ್ ವಿಡಿಯೊದಲ್ಲಿ ದಿವಂಗತ ನಟರಾದ ರಾಜ್ಕುಮಾರ್, ಶಂಕರ್ನಾಗ್, ವಿಷ್ಣುವರ್ಧನ್, ಅಂಬರೀಷ್ ಸೇರಿ ಹಲವು ಕಲಾವಿದರ ಜೊತೆ ವಿಜಯ್ ಮಾತುಕತೆ ನಡೆಸುತ್ತಾ ತಮ್ಮ ಹೊಸ ಚಿತ್ರದ ಬಗ್ಗೆ ವಿವರಿಸುವ ದೃಶ್ಯವಿದೆ. ಈ ವಿಡಿಯೊ ಮುಖಾಂತರ ವಿಜಯ್ ಅವರನ್ನು ಹಲವರು ನೆನಪಿಸಿಕೊಂಡಿದ್ದಾರೆ. ‘ಈ ವಿಡಿಯೊ ನೋಡಿ ಯಾಕೋ ಮನಸ್ಸು ಭಾರವಾಯ್ತು. ವಿಜಯ್ ತುಂಬಾ ಉತ್ಸಾಹದಿಂದ ತೊಡಗಿಸಿಕೊಂಡಿದ್ದ ಸಿನಿಮಾ ಇದು. ಅನೇಕ ಸಲ ಈ ಸಿನಿಮಾ ಕುರಿತು ಮಾತನಾಡಿದ್ದ ವಿಜಯ್ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಇಂದು ಅವರು ನಮ್ಮ ಜೊತೆ ಇಲ್ಲ ಎನ್ನುವುದು ಕಷ್ಟ’ ಎಂದು ನಿರ್ದೇಶಕ ಬಿ.ಎಸ್.ಲಿಂಗದೇವರು ಹೇಳಿದ್ದಾರೆ.