ಸದ್ಯ ‘ಗರಡಿ’ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿ, ಹೊಸ ಪ್ರೊಜೆಕ್ಟ್ ಕೈಗೆತ್ತಿಕೊಂಡಿರುವ ಯೋಗರಾಜ್ ಭಟ್ ಅವರು ಸೆಂಚುರಿ ಸ್ಟಾರ್ಗೆ ಆ್ಯಕ್ಷನ್ ಕಟ್ ಹೇಳುವುದರಲ್ಲಿ ಬ್ಯುಸಿಯಾಗಿದ್ದಾರೆ.ರಾಕ್ಲೈನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ, ಶಿವರಾಜ್ಕುಮಾರ್ ಅವರ ಜೊತೆಗೆ ಬಹುಭಾಷಾ ನಟ ಪ್ರಭುದೇವ ಅವರೂ ನಟಿಸುತ್ತಿದ್ದಾರೆ.ಹಾಸ್ಯ, ಭಾವನೆಗಳು ತುಂಬಿರುವ ಆ್ಯಕ್ಷನ್ ಡ್ರಾಮ ಸಿನಿಮಾ ಇದಾಗಿದೆ ಎಂದು ಮುಹೂರ್ತದ ದಿನ ಯೋಗರಾಜ್ ಭಟ್ ತಿಳಿಸಿದ್ದರು.