ಜಯದೇವಕ್ಕೆ ರಾಯ್: ಹೃದಯಾಘಾತಕ್ಕೆ ಒಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಮನ್ದೀಪ್ ರಾಯ್ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಅವರ ಮೂರು ರಕ್ತನಾಳಗಳಲ್ಲಿ ಸಮಸ್ಯೆ ಇದ್ದು, ಹೃದಯವೂ ದುರ್ಬಲವಾಗಿದೆ. ಸದ್ಯ ಅವರು ಐಸಿಯುವಿನಲ್ಲಿದ್ದು, ಶೀಘ್ರದಲ್ಲೇ ವಾರ್ಡ್ಗೆ ಸ್ಥಳಾಂತರಗೊಳ್ಳಲಿದ್ದಾರೆ’ ಎಂದು ಮಂಜುನಾಥ್ ತಿಳಿಸಿದರು.