<p>ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಅವರ ‘ಸೀತಾಯಣ’ ಚಿತ್ರದ ಸಾಹಿತ್ಯ ಸಹಿತ ಹಾಡಿನ ವಿಡಿಯೋವನ್ನು ನಟ ಉಪೇಂದ್ರ ಬಿಡುಗಡೆ ಮಾಡಿದರು.</p>.<p>ಅ. 25ರಂದು ವಿಡಿಯೋ ಬಿಡುಗಡೆ ಮಾಡಿದ ಉಪೇಂದ್ರ ಅವರು ಅಕ್ಷಿತ್ ಬೆನ್ನು ತಟ್ಟಿದರು.</p>.<p>ಸೀತಾಯಣದಲ್ಲಿ ಮದುವೆ ದೃಶ್ಯಕ್ಕೆ ಈ ಹಾಡನ್ನು ಜೋಡಿಸಲಾಗಿದೆ. ಹಾಡಿನ ದೃಶ್ಯ, ಶೂಟಿಂಗ್ ಸನ್ನಿವೇಶಗಳೂ ವಿಡಿಯೋದಲ್ಲಿವೆ.</p>.<p>ಅಂದಹಾಗೆ ಸೀತಾಯಣ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.</p>.<p>’ಶ್ರೀರಾಮ ಪತ್ನಿ, ಜನಕಸ್ಯ ಪುತ್ರಿ, ಸೀತಾಂಗನಾ ಸುಂದರ ಕೋಮಲಾಂಗಿ, ಭೂಗರ್ಭ ಜಾತಾ, ಭುವನೈಕ ಮಾತಾ ವಧೂವರಾಭ್ಯಂ ವರದಾ ಭವಂತು...’ ಸಾಲಿನಿಂದ ಹಾಡು ಆರಂಭವಾಗುತ್ತಿದೆ. ಈ ಸಾಲನ್ನೇ ಚಿತ್ರದ ಪ್ರಾರ್ಥನಾ ಗೀತೆಯಂತೆ ಬಳಸಿದ್ದೇವೆ ಎಂದು ಚಿತ್ರತಂಡ ಹೇಳಿಕೊಂಡಿದೆ.</p>.<p>ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ಸೀತಾರಾಮ ಕಲ್ಯಾಣವನ್ನು ವರ್ಣಿಸಿದ ಪರಿ ಮತ್ತು ಮುದ್ರಿತ ಆಮಂತ್ರಣಗಳು ಇಲ್ಲದ ಕಾಲದಲ್ಲಿ ಶ್ಲೋಕ ರೂಪದಲ್ಲಿ ಮದುವೆಯ ಆಹ್ವಾನ ಹೇಗೆ ಇರುತ್ತಿತ್ತು ಎಂಬುದನ್ನು ಸಂಸ್ಕೃತದ ಈ ಸಾಲುಗಳು ಚಿತ್ರಿಸಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.</p>.<p>ವಿಡಿಯೋ ನೋಡಲು ಲಿಂಕ್:https://www.youtube.com/watch?v=SEW7MAPH24I</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಅವರ ‘ಸೀತಾಯಣ’ ಚಿತ್ರದ ಸಾಹಿತ್ಯ ಸಹಿತ ಹಾಡಿನ ವಿಡಿಯೋವನ್ನು ನಟ ಉಪೇಂದ್ರ ಬಿಡುಗಡೆ ಮಾಡಿದರು.</p>.<p>ಅ. 25ರಂದು ವಿಡಿಯೋ ಬಿಡುಗಡೆ ಮಾಡಿದ ಉಪೇಂದ್ರ ಅವರು ಅಕ್ಷಿತ್ ಬೆನ್ನು ತಟ್ಟಿದರು.</p>.<p>ಸೀತಾಯಣದಲ್ಲಿ ಮದುವೆ ದೃಶ್ಯಕ್ಕೆ ಈ ಹಾಡನ್ನು ಜೋಡಿಸಲಾಗಿದೆ. ಹಾಡಿನ ದೃಶ್ಯ, ಶೂಟಿಂಗ್ ಸನ್ನಿವೇಶಗಳೂ ವಿಡಿಯೋದಲ್ಲಿವೆ.</p>.<p>ಅಂದಹಾಗೆ ಸೀತಾಯಣ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.</p>.<p>’ಶ್ರೀರಾಮ ಪತ್ನಿ, ಜನಕಸ್ಯ ಪುತ್ರಿ, ಸೀತಾಂಗನಾ ಸುಂದರ ಕೋಮಲಾಂಗಿ, ಭೂಗರ್ಭ ಜಾತಾ, ಭುವನೈಕ ಮಾತಾ ವಧೂವರಾಭ್ಯಂ ವರದಾ ಭವಂತು...’ ಸಾಲಿನಿಂದ ಹಾಡು ಆರಂಭವಾಗುತ್ತಿದೆ. ಈ ಸಾಲನ್ನೇ ಚಿತ್ರದ ಪ್ರಾರ್ಥನಾ ಗೀತೆಯಂತೆ ಬಳಸಿದ್ದೇವೆ ಎಂದು ಚಿತ್ರತಂಡ ಹೇಳಿಕೊಂಡಿದೆ.</p>.<p>ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ಸೀತಾರಾಮ ಕಲ್ಯಾಣವನ್ನು ವರ್ಣಿಸಿದ ಪರಿ ಮತ್ತು ಮುದ್ರಿತ ಆಮಂತ್ರಣಗಳು ಇಲ್ಲದ ಕಾಲದಲ್ಲಿ ಶ್ಲೋಕ ರೂಪದಲ್ಲಿ ಮದುವೆಯ ಆಹ್ವಾನ ಹೇಗೆ ಇರುತ್ತಿತ್ತು ಎಂಬುದನ್ನು ಸಂಸ್ಕೃತದ ಈ ಸಾಲುಗಳು ಚಿತ್ರಿಸಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.</p>.<p>ವಿಡಿಯೋ ನೋಡಲು ಲಿಂಕ್:https://www.youtube.com/watch?v=SEW7MAPH24I</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>