ನಿರ್ದೇಶಕ ಎಚ್ಎಂಕೆ ಮೂರ್ತಿ ಅವರ ಜೊತೆ ಸಹಾಯಕರಾಗಿ ಕೆಲಸ ಮಾಡಿದ್ದ ಅವರು, ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ‘ನಮ್ಮೂರ ಯಜಮಾನ (2002)’, ‘ಸಿಂಧು’ (1998), ‘ನನ್ ಲವ್ ಮಾಡ್ತಿಯಾ’ (2004) ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದರು. ಅವರ ನಿರ್ಮಾಣದ ಕೊನೆಯ ಚಿತ್ರ ‘ಬಿರುಮಳೆ’ ಕಳೆದ ವರ್ಷವೇ ನಿರ್ಮಾಣ ಪೂರ್ಣಗೊಂಡಿತ್ತಾದರೂ ಕೋವಿಡ್ ಕಾರಣಕ್ಕೆ ಬಿಡುಗಡೆ ಆಗಿರಲಿಲ್ಲ.